'ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ'
ಬೆಂಗಳೂರು, ಆಗಸ್ಟ್ 4 : ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ನ 25 ಸಂಸದರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿಯೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರಿನ
ಆನಂದ್
ರಾವ್
ವೃತ್ತದ
ಬಳಿಯ
ಗಾಂಧಿ
ಪ್ರತಿಮೆ
ಮುಂದೆ
ಕೆಪಿಸಿಸಿ
ಅಧ್ಯಕ್ಷ
ಡಾ.ಜಿ.ಪರಮೇಶ್ವರ,
ಯುವ
ಕಾಂಗ್ರೆಸ್
ಅಧ್ಯಕ್ಷ
ರಿಜ್ವಾನ್
ಅರ್ಷದ್
ಮುಂತಾದ
ಕಾಂಗ್ರೆಸ್
ನಾಯಕರು
ಕೇಂದ್ರ
ಸರ್ಕಾರದ
ವಿರುದ್ಧ
ಪ್ರತಿಭಟನೆ
ನಡೆಸಿದರು.
["ಕಳಂಕಿತ
ರಾಜೀನಾಮೆ
ನಾವು
ಕೇಳುತ್ತಿಲ್ಲ,
ದೇಶವೇ
ಆಗ್ರಹಿಸುತ್ತಿದೆ"]
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ ಅವರು 'ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೆಂಬುದುದು ಸಾಬೀತಾಗಿದೆ. ಸರ್ಕಾರದ ವಿರದ್ಧ ಧ್ವನಿ ಎತ್ತಿದ್ದಕ್ಕೆ ಅಮಾನತು ಶಿಕ್ಷೆ ವಿಧಿಸಿ ಸಂಸತ್ಗೆ ಅವಮಾನ ಮಾಡಿದ್ದಾರೆ' ಎಂದು ಆರೋಪಿಸಿದರು. [ಕೆ ಎಚ್ ಮುನಿಯಪ್ಪ ಸೇರಿ 27 ಸಂಸದರು ಅಮಾನತು]
ಮಂಗಳೂರಲ್ಲಿ ಪ್ರತಿಭಟನೆ : ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿರುವುದರ ವಿರುದ್ಧ ಮಂಗಳೂರಿನಲ್ಲೂ ಪ್ರತಿಭಟನೆ ನಡೆಯಿತು, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸೋಮವಾರ
ಲೋಕಸಭೆ
ಕಲಾಪಕ್ಕೆ
ಅಡ್ಡಿಪಡಿಸಿದ
25
ಕಾಂಗ್ರೆಸ್
ಸಂಸದರನ್ನು
ಅಮಾನತು
ಮಾಡಿ
ಸ್ಪೀಕರ್
ಸುಮಿತ್ರಾ
ಮಹಾಜನ್
ಆದೇಶ
ಹೊರಡಿಸಿದ್ದರು.
ಕರ್ನಾಟಕದ
6
ಸಂಸದರು
ಸೇರಿದಂತೆ
25
ಜನರು
ಐದು
ದಿನ
ಕಲಾಪಕ್ಕೆ
ಹಾಜರಾಗುವಂತಿಲ್ಲ.
ಪಕ್ಷದ ಸಂಸದರ ಅಮಾನತಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಐದು ದಿನಗಳ ಕಾಲ ಲೋಕಸಭೆ ಕಲಾಪ ಬಹಿಷ್ಕರಿಸಿದೆ. ಸಂಸತ್ನ ಗಾಂಧಿ ಪ್ರತಿಮೆ ಮುಂಭಾಗ ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.