ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭಾ ಚುನಾವಣೆ: ಕಳೆದ ಬಾರಿ ಸೋತವರಿಗಿಲ್ಲ ಕಾಂಗ್ರೆಸ್ ಟಿಕೆಟ್

ಕಳದೆ ಬಾರಿ ರಾಜ್ಯದಾದ್ಯಂತ ಕಾಂಗ್ರೆಸ್ ಅಲೆ ಇತ್ತು. ಹೀಗಿದ್ದೂ ಸೋತವರು ಈ ಬಾರಿ ಗೆಲ್ಲುವುದು ಕಷ್ಟ. ಕಡಿಮೆ ಅಂತರದಲ್ಲಿ ಪರಾಭವಗೊಂಡವರಿಗೆ ಮಣೆ ಹಾಕಿ, ದೊಡ್ಡ ಅಂತರದಲ್ಲಿ ಸೋತವರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ತಂತ್ರ.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 25: ಶತಾಯ ಗತಾಯ ಕರ್ನಾಟಕ ರಾಜ್ಯವನ್ನು ತನ್ನ ಕೈಯಲ್ಲೇ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್ 2018ರ ವಿಧಾನಸಭಾ ಚುನಾವಣೆಗೆ ಭಾರೀ ರಣತಂತ್ರವನ್ನೇ ಹೆಣೆಯುತ್ತಿದೆ. ಈಗಾಗಲೇ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ರಾಜ್ಯಕ್ಕೆ ಬಂದು ಪಕ್ಷದೊಳಗೆ ಸಂಚಲನ ಮೂಡಿಸಿದ್ದಾರೆ.

ಇದೀಗ ಹೊಸ ಸುದ್ದಿಯಾಗಿ ಕಳೆದ ಅಂದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಅಂತರದಿಂದ ಸೋತವರಿಗೆ ಕಾಂಗ್ರೆಸ ಟಿಕಟ್ ನೀಡದಿರಲು ತೀರ್ಮಾನಿಸಿದೆ ಎನ್ನಲಾಗಿದೆ.

Congress decided not to give tickets for those who lost in 2013 election

ಕಾಂಗ್ರೆಸ್ ಸರ್ವೆ ಸಂಸ್ಥೆಯೊಂದರಿಂದ ರಾಜ್ಯಾದ್ಯಂತ ಪ್ರತೀಕ ಕ್ಷೇತ್ರದಲ್ಲೂ ಸಮೀಕ್ಷೆ ನಡೆಸಿತ್ತು. ಚುನಾವಣೆಗೆ ಸಂಬಂಧಿಸಿದಂತೆ ನಡೆಸದ ಈ ಸಮೀಕ್ಷೆಯ ಮಾಹಿತಿಗಳನ್ನು ಅವಲೋಕಿಸಿ ಹೊಸ ಹೊಸ ತೀರ್ಮಾನಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದರಲ್ಲಿ ಸೋತವರಿಗೆ ಟಿಕೆಟ್ ನೀಡದೇ ಇರುವುದೂ ಒಂದು.

ಕಳದೆ ಬಾರಿ ರಾಜ್ಯದಾದ್ಯಂತ ಕಾಂಗ್ರೆಸ್ ಅಲೆ ಇತ್ತು. ಹೀಗಿದ್ದೂ ಸೋತವರು ಈ ಬಾರಿ ಗೆಲ್ಲುವುದು ಕಷ್ಟ. ಕಡಿಮೆ ಅಂತರದಲ್ಲಿ ಕಳೆದ ಬಾರಿ ಪರಾಭವಗೊಂಡವರಿಗೆ ಮಾತ್ರ ಮಣೆ ಹಾಕಿ, ದೊಡ್ಡ ಅಂತರದಲ್ಲಿ ಸೋತವರಿಗೆ ಟಿಕೆಟ್ ನೀಡದೆ ಹೊಸ ಮುಖಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಇನ್ನು ಕೆ.ಸಿ ವೇಣುಗೋಪಾಲ್ ಸಲಹೆಯ ಮೇರೆಗೆ ಟಿಕೆಟ್ ಹಂಚಿಕೆ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ.

ಕೆಪಿಸಿಸಿ ಅಧ್ಯಕ್ಷರ ನೇಮಕ, ಟಿಕೆಟ್ ಹಂಚಿಕೆ ಸೇರಿದಂತೆ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ ತೀರ್ಮಾನಗಳನ್ನು ಕೈ ಪಕ್ಷ ಸದ್ಯದಲ್ಲೇ ತೆಗೆದುಕೊಳ್ಳುವ ಸಾಧ್ಯತೆ ಇದೆ.

English summary
It is said to be that Congress high command taken a strong decision regarding the Karnataka assembly elections 2018. Party heads decided not to give ticket for those who lost in the 2013 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X