ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ, ಮೌನ ಮುರಿದ ಸಿದ್ದರಾಮಯ್ಯ
ಬೆಂಗಳೂರು, ಜನವರಿ 29 : ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನ ಮುರಿದಿದ್ದಾರೆ. ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಅವರನ್ನು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿದ್ದಾರೆ. ಇತ್ತ ಅನುಪಮಾ ಶೆಣೈ ಅವರಿಗೆ ರಜೆ ಮೇಲೆ ತೆರಳುವಂತೆ ಗೃಹ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ
ಶುಕ್ರವಾರ
ಮಾಧ್ಯಮಗಳ
ಜೊತೆ
ಮಾತನಾಡಿದ
ಸಿದ್ದರಾಮಯ್ಯ
ಅವರು,
'ಕೂಡ್ಲಿಗಿ
ಡಿವೈಎಸ್ಪಿ
ಅನುಪಮಾ
ಶೆಣೈ
ಅವರು
ಒಂದು
ವರ್ಷದಿಂದ
ಅಲ್ಲಿ
ಕೆಲಸ
ಮಾಡುತ್ತಿದ್ದರು.
ಆದ್ದರಿಂದ
ಅವರನ್ನು
ವರ್ಗಾವಣೆ
ಮಾಡಲಾಗಿದೆ.
ಇದರಲ್ಲಿ
ತಪ್ಪು
ಹುಡುಕಲು
ಸಾಧ್ಯವೇ?'
ಎಂದು
ಪ್ರಶ್ನಿಸಿದರು.
[ಪೊಲೀಸ್
ಇಲಾಖೆಯಲ್ಲಿ
ಬಡ್ತಿ,
ವರ್ಗಾವಣೆ
:
ಇಲ್ಲಿದೆ
ಪಟ್ಟಿ]
ಅನುಪಮಾ ಶೆಣೈ ಅವರು ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ಅವರ ಕರೆ ಸ್ವೀಕರಿಸದ್ದಕ್ಕೆ ವರ್ಗಾವಣೆ ಮಾಡಿದ್ದಾರೆ ಎಂಬ ಬಗ್ಗೆ ಪತ್ರಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, 'ಈ ಬಗ್ಗೆ ನನಗೇನೂ ತಿಳಿದಿಲ್ಲ' ಎಂದು ಹೇಳಿದರು.
ರಜೆ ಮೇಲೆ ತೆರಳಲು ಸೂಚನೆ : ಡಿವೈಎಸ್ಪಿ ಅನುಪಮಾ ಶೆಣೈ ಅವರ ವರ್ಗಾವಣೆ ವಿಚಾರದಲ್ಲಿ ಭಾರೀ ವಿವಾದ ಉಂಟಾಗಿರುವುದರಿಂದ ಅವರನ್ನು 15 ದಿನಗಳ ಕಾಲ ರಜೆ ಮೇಲೆ ತೆರಳುವಂತೆ ಗೃಹ ಇಲಾಖೆ ಸೂಚನೆ ನೀಡಿದೆ. ವರ್ಗಾವಣೆ ವಿಚಾರ ಮಾಧ್ಯಮಗಳಲ್ಲಿ ಬಂದ ಬಳಿಕ ಅವರಿಗೆ ಒಂದು ವಾರಗಳ ಕಾಲ ರಜೆ ನೀಡಲಾಗಿತ್ತು.
ವರ್ಗಾವಣೆ
ಶಿಕ್ಷೆ
:
ಅನುಪಮಾ
ಶೆಣೈ
ಅವರನ್ನು
ಸರ್ಕಾರ
ವಿಜಯಪುರದ
ಇಂಡಿಯ
ಡಿವೈಎಸ್ಪಿಯಾಗಿ
ವರ್ಗಾವಣೆ
ಮಾಡಲಾಗಿದೆ.
ಆದರೆ,
ಅವರು
ಅಲ್ಲಿ
ಅಧಿಕಾರ
ಸ್ವೀಕರಿಸುವ
ಮೊದಲೇ
ಅವರಿಗೆ
15
ದಿನಗಳ
ಕಾಲ
ಕಡ್ಡಾಯ
ರಜೆ
ಮೇಲೆ
ತೆರಳುವಂತೆ
ಸೂಚನೆ
ನೀಡಲಾಗಿದೆ.
ಇದು
ಮತ್ತೊಂದು
ವಿವಾದಕ್ಕೆ
ಕಾರಣವಾಗಿದೆ.
ಸಚಿವರ ವಜಾಕ್ಕೆ ಒತ್ತಾಯ : 'ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು' ಎಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, 'ಸಿದ್ದರಾಮಯ್ಯ ಸರ್ಕಾರ ಮರ್ಯಾದೆ ಉಳಿಸಿಕೊಳ್ಳಬೇಕಾದರೆ ಪರಮೇಶ್ವರ ನಾಯಕ್ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು' ಎಂದರು. 'ಸಚಿವರ ಬೆಂಬಲಿಗರ ಅಕ್ರಮ ಮರಳು ದಂಧೆಗೆ ಸಹಕರಿಸದಿದ್ದಕ್ಕೆ ಅನುಪಮಾ ಶೆಣೈ ಅವರನ್ನ ವರ್ಗಾವಣೆ' ಮಾಡಲಾಗಿದೆ ಎಂದು ಆರೋಪಿಸಿದರು.