ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿಕ್ಕಮಗಳೂರು: ಗನ್ ತೋರಿಸಿದ ಪಿಎಸ್ಐಗೆ ಕಪಾಳಕ್ಕೆ ಬಾರಿಸಿದ ಜನ
ಜನರಿಗೆ ಗನ್ ತೋರಿಸಿದ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪಿಎಸ್ಐ ಗವಿರಾಜ್ ಗೆ ಜನ ಕಪಾಳಕ್ಕೆ ಬಾರಿಸಿದ ಘಟನೆ ಚಿಕ್ಕಮಗಳೂರಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು, ಫೆಬ್ರವರಿ 28: ಜನರಿಗೆ ಗನ್ ತೋರಿಸಿದ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪಿಎಸ್ಐ ಗವಿರಾಜ್ ಗೆ ಜನ ಕಪಾಳಕ್ಕೆ ಬಾರಿಸಿದ ಘಟನೆ ಚಿಕ್ಕಮಗಳೂರಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂಗ್ತಿಹಳ್ಳಿ ಗ್ರಾಮದಲ್ಲಿ ಪಿಎಸ್ಐ ಗವಿರಾಜ್ ಕಾರಿಗೂ ಮತ್ತೊಂದು ಕಾರಿಗೂ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ಸ್ಥಳೀಯರು ಮತ್ತು ಗವಿರಾಜ್ ಮಧ್ಯೆ ಗಲಾಟೆ ಆರಂಭವಾಗಿದೆ. ಈ ಸಂದರ್ಭದಲ್ಲಿ ತಮ್ಮ ಮೇಲೆ ಏರಿ ಬರುತ್ತಿದ್ದ ಗ್ರಾಮಸ್ಥರನ್ನು ಬೆದರಿಸಲು ಪಿಎಸ್ಐ ಪಿಸ್ತೂಲ್ ತೆಗೆದಿದ್ದಾರೆ.[ಚಿಕ್ಕಮಗಳೂರು:ಸ್ವಾಮೀಜಿಯನ್ನೂ ಬಿಡದ ಕಳ್ಳರು; ಕಾರು ಅಡ್ಡಗಟ್ಟಿ ದರೋಡೆ]
ಗವಿರಾಜ್ ಪಿಸ್ತೂಲ್ ತೆಗೆದಿದ್ದನ್ನು ನೋಡಿದ ಸ್ಥಳೀಯ ವ್ಯಕ್ತಿಯೊಬ್ಬ ತಕ್ಷಣ ಪಿಎಸ್ಐ ಎಂದೂ ನೋಡದೆ ಕೆನ್ನೆಗೆ ಬಾರಿಸಿದ್ದಾನೆ. ಇದನ್ನು ಪ್ರಶ್ನಿಸಲು ಬಂದ ಇಬ್ಬರು ಪೊಲೀಸರನ್ನು ಗ್ರಾಮಸ್ಥರು ಕೂಡಿಹಾಕಿದ್ದಾರೆ.[ತಡವಾಗಿ ಬಂದ್ ಯಶ್ ಕಾರಿನ ಗ್ಲಾಸ್ ಪೀಸ್ ಪೀಸ್]
ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
Comments
English summary
Chikkamagaluru local people slapped to the PSI Gaviraj who showed gun at them in a clash situation after the PSI car got accident near Moogtihalli.