ಪ್ರಶ್ನೆ ಪತ್ರಿಕೆ ಸೋರಿಕೆ : ಪಲ್ಲವಿ ಅಕುರಾತಿ ವರ್ಗಾವಣೆ
ಬೆಂಗಳೂರು, ಏಪ್ರಿಲ್ 02 : ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಪಲ್ಲವಿ ಅಕುರಾತಿ ಅವರನ್ನು ಎತ್ತಂಗಡಿ ಮಾಡಲಾಗಿದೆ. ಶುಕ್ರವಾರ ಒಟ್ಟು 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಪಲ್ಲವಿ ಅರುಕರಾತಿ ಅವರನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಸಾರಿಗೆ ಇಲಾಖೆಯ ಆಯುಕ್ತ ರಾಮೇಗೌಡ ಅವರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. [ಪ್ರಶ್ನೆ ಪತ್ರಿಕೆ ಸೋರಿಕೆ : 10 ಪ್ರಮುಖ ಬೆಳವಣಿಗೆಗಳು]
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಎರಡು ಬಾರಿ ಸೋರಿಕೆಯಾದ ಜವಾಬ್ದಾರಿಯನ್ನು ಇಲಾಖೆಯ ನಿರ್ದೇಶಕರೇ ಹೊರಬೇಕು ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಇಲಾಖೆಯ 40 ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. [ಏಪ್ರಿಲ್ 12ಕ್ಕೆ ಮರು ಪರೀಕ್ಷೆ, ಎಕ್ಸಾಂ ಬರೆಯಲ್ಲ: ವಿದ್ಯಾರ್ಥಿಗಳು]
ಮಾರ್ಚ್ 21ರಂದು 1.75 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಮಾರ್ಚ್ 31ರಂದು ಮರುಪರೀಕ್ಷೆ ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ, ಅಂದು ಬೆಳಗ್ಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದು ಮಾಡಲಾಗಿತ್ತು. ಸದ್ಯ, ಏ.12ರಂದು ಮರು ಪರೀಕ್ಷೆ ನಡೆಸುವುದಾಗಿ ಇಲಾಖೆ ದಿನಾಂಕ ಪ್ರಕಟಿಸಿದೆ. [ದ್ವೇಷಕ್ಕಾಗಿ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ?]
ವರ್ಗಾವಣೆಯಾದ
ಐಎಎಸ್
ಅಧಿಕಾರಿಗಳ
ಪಟ್ಟಿ
[ಪ್ರಶ್ನೆ
ಪತ್ರಿಕೆ
ಸೋರಿಕೆ,
ಪಿಯು
ವಿದ್ಯಾರ್ಥಿಗಳಲ್ಲಿ
ಭುಗಿಲೆದ್ದ
ಆಕ್ರೋಶ]
*
ಡಾ.ಜಿ.ಕಲ್ಪನಾ
-
ಮೈಸೂರು
ಆಡಳಿತ
ತರಬೇತಿ
ಸಂಸ್ಥೆ
ಮಹಾನಿರ್ದೇಶಕಿ
*
ಶಾಲಿನಿ
ರಜನೀಶ್
-
ಪ್ರಧಾನ
ಕಾರ್ಯದರ್ಶಿ,
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಇಲಾಖೆ
*
ಎಸ್.ಆರ್.ಉಮಾಶಂಕರ್
-
ಕಾರ್ಯದರ್ಶಿ,
ಕನ್ನಡಸಂಸ್ಕೃತಿ
ಮತ್ತು
ವಾರ್ತಾ
ಇಲಾಖೆ
*
ಟಿ.ಕೆ.ಅನಿಲ್
ಕುಮಾರ್
-
ಮೈಸೂರು
ಕಾಗದ
ಕಾರ್ಖಾನೆಯ
ವ್ಯವಸ್ಥಾಪಕ
ನಿರ್ದೇಶಕ
*
ಹರ್ಷ
ಗುಪ್ತ
-
ಕಾರ್ಯದರ್ಶಿ,
ಆಹಾರ
ಮತ್ತು
ನಾಗರಿಕ
ಪೂರೈಕೆ
ಇಲಾಖೆ
*
ನವೀನ್ರಾಜ್
ಸಿಂಗ್
-
ಕಾರ್ಯದರ್ಶಿ,
ಹಿಂದುಳಿದ
ವರ್ಗಗಳ
ಕಲ್ಯಾಣ
ಇಲಾಖೆ
*
ವಿ.ಪೊನ್ನುರಾಜ್
-
ಸಾರ್ವಜನಿಕ
ಶಿಕ್ಷಣ
ಇಲಾಖೆ
ಆಯುಕ್ತ