ಮೈಸೂರು : ರಾಜು ಕೊಲೆ ಪ್ರಕರಣದ ತನಿಖೆ ಸಿಸಿಬಿಗೆ
ಧರ್ಮಸ್ಥಳ, ಮಾರ್ಚ್ 14 : 'ಮೈಸೂರಿನಲ್ಲಿ ನಡೆದ ವಿಶ್ವಹಿಂದೂ ಪರಿಷತ್ ಮುಖಂಡ ಮತ್ತು ಬಿಜೆಪಿ ಕಾರ್ಯಕರ್ತ ರಾಜು ಅವರ ಕೊಲೆ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ಸೋಮವಾರ
ಧರ್ಮಸ್ಥಳದಲ್ಲಿ
ಮಾತನಾಡಿದ
ಡಾ.ಜಿ.ಪರಮೇಶ್ವರ
ಅವರು,
'ಶಾಂತಿ
ಕಾಪಾಡುವಂತೆ
ಜನರಿಗೆ
ಮನವಿ
ಮಾಡಿದರು.
ಆರೋಪಿಗಳನ್ನು
ಶೀಘ್ರದಲ್ಲಿಯೇ
ಬಂಧಿಸುವಂತೆ
ಪೊಲೀಸರಿಗೆ
ಸೂಚನೆ
ನೀಡಲಾಗಿದೆ'
ಎಂದರು.
[ಮೈಸೂರಲ್ಲಿ
ಬಿಜೆಪಿ
ಕಾರ್ಯಕರ್ತನ
ಹತ್ಯೆ]
'ರಾಜು ಅವರ ಹತ್ಯೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲು ಯಾರೂ ಪ್ರಯತ್ನಿಸಿಬೇಡಿ, ಜನರು ವದಂತಿಗಳಿಗೆ ಕಿವಿಗೊಡಬೇಡಿ' ಎಂದು ಪರಮೇಶ್ವರ್ ಕರೆ ನೀಡಿದರು. [ಮೈಸೂರು : ಬಿಜೆಪಿ ಕಾರ್ಯಕರ್ತನ ಕೊಲೆ, ಕೋಮು ಗಲಭೆ ಎಚ್ಚರಿಕೆ]
'ಬಿಜೆಪಿ ಕಾರ್ಯಕರ್ತ ರಾಜು ಅವರ ಕೊಲೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಿ ಎಂದು ಸೂಚನೆ ನೀಡಲಾಗಿದೆ' ಎಂದು ಪರಮೇಶ್ವರ ಹೇಳಿದರು. [ಮೈಸೂರು ಬಂದ್ : ಕ್ಷಣ-ಕ್ಷಣದ ಮಾಹಿತಿ]
ಭಾನುವಾರ ಹತ್ಯೆ ನಡೆದಿತ್ತು : ವಿಶ್ವಹಿಂದೂ ಪರಿಷತ್ ಮುಖಂಡ ಮತ್ತು ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ದುಷ್ಕರ್ಮಿಗಳು ಭಾನುವಾರ ಸಂಜೆ ಹತ್ಯೆ ಮಾಡಿದ್ದರು. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಉದಯಗಿರಿ ಪೊಲೀಸರು ತನಿಖೆ ಆರಂಭಿಸಿದ್ದರು. ಈಗ ಸರ್ಕಾರ ತನಿಖೆಯನ್ನು ಸಿಸಿಬಿಗೆ ವಹಿಸಿದೆ.
ರಾಜು ಕೊಲೆ ಪ್ರಕರಣ ಖಂಡಿಸಿ ಸೋಮವಾರ ಬಿಜೆಪಿ ಮೈಸೂರು ಬಂದ್ಗೆ ಕರೆ ನೀಡಿದೆ. ಬಂದ್ ವೇಳೆ ಹಿಂಸಾಚಾರ ನಡೆದಿದ್ದು, ಅಲ್ಲಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಬಸ್ಸುಗಳಿಗೆ ಕಲ್ಲು ತೂರಲಾಗಿದ್ದು, ಆಟೋ ಮತ್ತು ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದೆ.