ಸರ್ವಪಕ್ಷ ಸಭೆಗೆ ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ!
ಬೆಂಗಳೂರು, ಸೆ. 21: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ಸರ್ವಪಕ್ಷದ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಬುಧವಾರ ಸಂಜೆ 5 ಗಂಟೆಗೆ ಕರೆದಿರುವ ಸಭೆಗೆ ಹಾಜರಾಗದಿರಲು ಬಿಜೆಪಿ ನಿರ್ಧರಿಸಿದೆ. ಜೆಡಿಎಸ್ ಸದಸ್ಯರು ಹಾಜರಾಗುವುದು ಅನುಮಾನವಾಗಿದೆ.[ಸೆ.21ರಿಂದ 27ರವರೆಗೂ ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಹರಿಸಿ]
ಸಿದ್ದರಾಮಯ್ಯ
ಅವರು
ಕರೆದಿರುವ
ಸರ್ವಪಕ್ಷಸಭೆ
ಅನಗತ್ಯ,
ನಾವು
ವಿಶೇಷ
ಅಧಿವೇಶನ
ಕರೆಯುವಂತೆ
ಕೋರಿದ್ದೇವೆ.
ಅದಕ್ಕೆ
ಬೆಲೆ
ನೀಡಿಲ್ಲ
ಎಂದು
ಬಿಜೆಪಿ
ರಾಜ್ಯಾಧ್ಯಕ್ಷ
ಬಿಎಸ್
ಯಡಿಯೂರಪ್ಪ
ಪ್ರತಿಕ್ರಿಯಿಸಿದ್ದಾರೆ.
[ನೀರಿನ
ಸಮಸ್ಯೆಗೆ
'ದಿವ್ಯ'
ಉಪಾಯ
ನೀಡಿದ
ರಮ್ಯಾ]
ಪೂರ್ವನಿಗದಿತ ಕಾರ್ಯಕ್ರಮದಂತೆ ಯಡಿಯೂರಪ್ಪ ಅವರು ಕಡೂರು ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಬಿಜೆಪಿ ಅಂದಿನಿಂದ ಹೇಳುತ್ತಾ ಬಂದಿದೆ ಆದರೆ, ಈ ಬಗ್ಗೆ ಸಿದ್ದರಾಮಯ್ಯ ದೃಢ ನಿರ್ಧಾರ ಕೈಗೊಂಡಿಲ್ಲ ಏಕೆ? ಎಂದು ಬಿಎಸ್ ವೈ ಪ್ರಶ್ನಿಸಿದ್ದಾರೆ.[ಕರ್ನಾಟಕಕ್ಕೆ ಮರಣಶಾಸನ : ಸಿದ್ದರಾಮಯ್ಯ]
ಜೆಡಿಎಸ್ ಕೂಡಾ ಅನುಮಾನ: ಜೆಡಿಎಸ್ ಸಂಸದ ಎಂಎಸ್ ಪುಟ್ಟರಾಜು ಅವರು ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಮಂಡ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು, ಸಂಸದರು, ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.