ಗೃಹ ಇಲಾಖೆ ಅಧೀನಕ್ಕೆ ಬರಲಿದೆ ಎಸಿಬಿ?
ಬೆಂಗಳೂರು, ಏಪ್ರಿಲ್ 13 : ನೂತನವಾಗಿ ರಚನೆ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗೃಹ ಇಲಾಖೆ ಅಧೀನದಲ್ಲಿ ಕೆಲಸ ಮಾಡಲಿದೆ. ಎಸಿಬಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಬದಲು ಗೃಹ ಇಲಾಖೆಯ ಅಧೀನಕ್ಕೆ ತರುವ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಭ್ರಷ್ಟಾಚಾರ
ನಿಗ್ರಹ
ದಳದ
ಬಗ್ಗೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅಧ್ಯಕ್ಷತೆಯಲ್ಲಿ
ಮಂಗಳವಾರ
ಸಭೆ
ನಡೆಯಿತು.
ಗೃಹ
ಸಚಿವ
ಡಾ.ಜಿ.ಪರಮೇಶ್ವರ
ಮತ್ತು
ಕಾನೂನು
ಸಚಿವ
ಟಿ.ಬಿ.ಜಯಚಂದ್ರ
ಅವರು
ಸಭೆಯಲ್ಲಿ
ಪಾಲ್ಗೊಂಡಿದ್ದರು.
ಎಸಿಬಿಗೆ
ಅಗತ್ಯ
ಮೂಲಸೌಕರ್ಯ
ಕಲ್ಪಿಸುವ
ಸಭೆಯಲ್ಲಿ
ಚರ್ಚಿಸಲಾಯಿತು.[ಎಸಿಬಿ
ಬಗ್ಗೆ
ಸಿದ್ದರಾಮಯ್ಯ
ಸ್ಪಷ್ಟನೆ]
ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, 'ಈಗಾಗಲೇ 18 ರಾಜ್ಯಗಳಲ್ಲಿ ಎಸಿಬಿ ಕೆಲಸ ಮಾಡುತ್ತಿದೆ. ಅಲ್ಲಿ ಹೇಗೆ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ಪಡೆಯಲಾಗುತ್ತದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಎಡಿಜಿಪಿ) ಅಡಿಯಲ್ಲೇ ಎಸಿಬಿ ಕಾರ್ಯ ನಿರ್ವಹಿಸಲಿದೆ' ಎಂದು ಹೇಳಿದರು. ['ಲೋಕಾಯುಕ್ತ ಸಂಸ್ಥೆ ಮುಚ್ಚಲು ಸರ್ಕಾರದ ಷಡ್ಯಂತ್ರ']
ಹೈಕೋರ್ಟ್ನಲ್ಲಿ
ಸಮರ್ಥ
ವಾದ
:
'ಲೋಕಾಯುಕ್ತದಲ್ಲಿನ
ಪ್ರಕರಣಗಳನ್ನು
ಎಸಿಬಿಗೆ
ವರ್ಗಾವಣೆ
ಮಾಡಲು
ಕರ್ನಾಟಕ
ಹೈಕೋರ್ಟ್
ಮಧ್ಯಂತೆ
ತಡೆಯಾಜ್ಞೆ
ನೀಡಿದೆ.
ಕೋರ್ಟ್ನಲ್ಲಿ
ದಾಖಲಾಗಿರುವ
ಸಾರ್ವಜನಿಕ
ಹಿತಾಸಕ್ತಿ
ಅರ್ಜಿಗಳಿಗೆ
ಸಂಬಂಧಿಸಿದಂತೆ
ಸಮರ್ಥವಾಗಿ
ವಾದ
ಮಂಡಿಸಲಾಗುವುದು'
ಎಂದು
ಜಯಚಂದ್ರ
ಹೇಳಿದರು.
[ಎಸಿಬಿಗೆ
ಪ್ರಕರಣ
ವರ್ಗಾವಣೆಗೆ
ಕೋರ್ಟ್
ತಡೆ]
ಗೃಹ ಇಲಾಖೆ ಅಡಿ ಕೆಲಸ : ಎಸಿಬಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಬದಲು ಗೃಹ ಇಲಾಖೆಯ ಅಡಿ ಕೆಲಸ ಮಾಡುವಂತೆ ಮಾಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ವಿವಿಧ ರಾಜ್ಯಗಳಲ್ಲಿ ಎಸಿಬಿ ಹೇಗೆ ಕೆಲಸ ನಿರ್ವಹಿಸುತ್ತಿದೆ? ಎಂಬ ಮಾಹಿತಿ ದೊರೆತ ನಂತರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. [ಎಸಿಬಿಗೆ ಮೊದಲ ದೂರು ಸಿಎಂ ವಾಚ್ ಬಗ್ಗೆ]