ಕೆಪಿಎಸ್ಸಿ ಆಯ್ಕೆಪಟ್ಟಿ ರದ್ದು ಸಾಧ್ಯವಿಲ್ಲ: ಹೈಕೋರ್ಟ್
ಬೆಂಗಳೂರು, ಜೂನ್, 21: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)1998, 1999 ಹಾಗೂ 2004ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.
ಕೆಲವರು ಮಾಡಿದ ತಪ್ಪಿಗೆ ಇಡೀ ಆಯ್ಕೆ ಪಟ್ಟಿಯನ್ನೇ ರದ್ದು ಮಾಡಲು ಸಾಧ್ಯವಿಲ್ಲ. ಅಕ್ರಮಗಳಿಗೆ ಕೆಪಿ ಎಸ್ ಸಿಯೇ ಹೊಣೆಗಾರ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೇ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎರಡು ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣ ಮಾಡಿ ಎಂದು ನ್ಯಾಯಾಲಯ ತಿಳಿಸಿದೆ.[ಕೆಪಿಎಸ್ಸಿ ಮರುಪರೀಕ್ಷೆ ನಡೆಸಲು ಸರ್ಕಾರಕ್ಕೆ ಡೆಡ್ಲೈನ್]
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)1998, 1999 ಹಾಗೂ 2004ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಸಂಬಂಧ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.[ಕನ್ನಡದಲ್ಲೇ ಯುಪಿಎಸ್ಸಿ ಬರೆದ ಭೈರಪ್ಪ ಸಂದರ್ಶನ]
ಕೆಪಿಎಸ್ಸಿ ಅಕ್ರಮ ನೇಮಕಾತಿಗಳ ವಿರುದ್ಧ ಖಲೀಲ್ ಅಹಮದ್ ಸೇರಿ ಉದ್ಯೋಗ ವಂಚಿತರು 2012 ಹಾಗೂ 2013ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ನ್ಯಾ. ಎನ್.ಕುಮಾರ್ ಹಾಗೂ ಬಿ.ವೀರಪ್ಪ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪು ಕಾಯ್ದಿರಿತ್ತು.
ಹೈಕೋರ್ಟ್
ತೀರ್ಪಿನಲ್ಲಿ
ಹೇಳಿದ್ದೇನು?
*
ಕೆಪಿಎಸ್
ಸಿ
ಒಂದು
ಸಾಂವಿಧಾನಿಕ
ಸಂಸ್ಥೆ
*
ಕೇವಲ
ಸಾಂವಿಧಾನಿಕ
ಮಾನ್ಯತೆ
ನೀಡಿದರೆ
ಸಾಕಾಗದು
*
ರಾಜ್ಯ
ಸರ್ಕಾರ
ಹೊಸ
ನಿಯಮಾವಳಿ
ರೂಪಿಸಬೇಕು
*
ಸಾರ್ವಜನಿಕ
ಹಿತದೃಷ್ಟಿಯಲ್ಲಿ
ಅರ್ಹರ
ಆಯ್ಕೆಯಾಗಲಿ
*
1:5
ಅನುಪಾತದಲ್ಲಿ
ಅಭ್ಯರ್ಥಿಗಳ
ನೇಮಕ
ಮಾಡಿಕೊಳ್ಳಬೇಕು
*
ಎರಡು
ತಿಂಗಳೊಳಗೆ
ಆಯ್ಕೆ
ಪ್ರಕ್ರಿಯೆಯನ್ನು
ಪೂರ್ಣ
ಮಾಡಬೇಕು
*
ಕೆಲವರು
ಮಾಡಿದ
ತಪ್ಪಿಗೆ
ಇಡೀ
ಆಯ್ಕೆ
ಪಟ್ಟಿ
ರದ್ದು
ಮಾಡಲು
ಸಾಧ್ಯವಿಲ್ಲ