ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಜ. 25ರಂದು ಪ್ರಕಟ: ಸಿದ್ದರಾಮಯ್ಯ
ಬೆಂಗಳೂರು, ಜ. 24: ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಸೋಮವಾರ(ಜನವರಿ 25) ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದರು.
ಉಪಚುನಾವಣೆಯಲ್ಲಿ
ಸ್ಪರ್ಧಿಸುತ್ತಿರುವ
ಅಭ್ಯರ್ಥಿಗಳ
ಆಯ್ಕೆ
ಪೂರ್ಣಗೊಂಡಿದ್ದು,
ಹೆಬ್ಬಾಳ,
ಬೀದರ್,
ದೇವದುರ್ಗ
ಈ
ಮೂರು
ಕ್ಷೇತ್ರಗಳ
ಅಭ್ಯರ್ಥಿಗಳ
ಹೆಸರನ್ನು
ಪ್ರಕಟಿಸಲಾಗುವುದು
ಎಂದರು.
ಜಿಲ್ಲಾ
ಮತ್ತು
ತಾಲ್ಲೂಕು
ಪಂಚಾಯ್ತಿ
ಚುನಾವಣೆಗೆ
ಇನ್ನೂ
ಕಾಲವಕಾಶವಿದೆ.
ಈ
ಬಗ್ಗೆ
ಸ್ಥಳೀಯ
ಮುಖಂಡರೊಂದಿಗೆ
ಮಾತುಕತೆ
ನಡೆಸಿ
ಅಭ್ಯರ್ಥಿಗಳ
ಆಯ್ಕೆ
ನಡೆಸಲಾಗುವುದು
ಎಂದು
ತಿಳಿಸಿದರು.[ಉಪ
ಚುನಾವಣೆ
ವೇಳಾಪಟ್ಟಿ]
ಆತಂಕ ಬೇಡ: ಉಗ್ರರ ಬಂಧನ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಎನ್ಐಎ ಈಗಾಗಲೇ ಐದು ಮಂದಿಯನ್ನು ಬಂಧಿಸಿದೆ. ಇದಕ್ಕೆ ರಾಜ್ಯದ ಪೊಲೀಸರೂ ಸಹಕಾರ ಕೊಟ್ಟಿದ್ದಾರೆ. ಈಗ ನಡೆದಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವುದು ಬೇಡ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಭೈರತಿ ಸುರೇಶ್, ರೆಹಮಾನ್ ಷರೀಫ್, ಎಚ್.ಎಂ.ರೇವಣ್ಣ ಹೆಸರುಗಳು ಕೇಳಿಬರುತ್ತಿದ್ದು, ಯಾರಿಗೆ ಟಿಕೆಟ್? ಎಂಬುದು ಇನ್ನೂ ಖಚಿತವಾಗಿಲ್ಲ. ಹಿರಿಯ ನಾಯಕ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರು ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಜೆಡಿಎಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ರೆಹಮಾನ್ ಷರೀಫ್ ಅವರು ಜೆಡಿಎಸ್ ಸೇರುತ್ತಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.