ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಬೇಡ. ಬಿಎಸ್ವೈ ಎಚ್ಚರಿಕೆ
ಬೆಂಗಳೂರು, ಅಕ್ಟೋಬರ್ 27: ಸಾರ್ವಜನಿಕರ ವಿರೋಧದ ನಡುವೆಯೂ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ
ಮಾತನಾಡಿದ
ಯಡಿಯೂರಪ್ಪ,
ಕಳೆದ
ವರ್ಷ
ಟಿಪ್ಪು
ಸುಲ್ತಾನ್
ಜಯಂತಿ
ಆಚರಣೆ
ಮಾಡಿದ
ಪರಿಣಾಮ
ಅನೇಕ
ಕಡೆ
ಗಲಭೆಗಳಾಗಿತ್ತು.
ಈಗ
ಮತ್ತೊಮ್ಮೆ
ಸರ್ಕಾರ
ಈ
ಜನ
ವಿರೋಧಿ
ಆಚರಣೆಗೆ
ಮುಂದಾಗಿದೆ.
ಜಯಂತಿ
ಆಚರಣೆಗೆ
ಅವಕಾಶ
ನೀಡದಂತೆ
ಸೂಕ್ತ
ತೀರ್ಮಾನ
ಕೈಗೊಳ್ಳಲಿ
ಎಂದು
ಆಗ್ರಹಿಸಿದರು.[ಟಿಪ್ಪು
ಸುಲ್ತಾನ್
ಬೇಸಿಗೆ
ಅರಮನೆ
ಪ್ರವೇಶ
ಶುಲ್ಕ
ಏರಿಕೆ]
ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಬಹುತೇಕ ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ ಮಡಿಕೇರಿ, ಮೈಸೂರು ಸೇರಿದಂತೆ ಅನೇಕ ಕಡೆ ಗಲಭೆಗಳಾದವು. ಈಗಲೂ ಕೂಡ ಕೆಲ ಸಮಾಜಘಾತುಕ ಶಕ್ತಿಗಳು ರಾಜ್ಯದ ವಿವಿಧೆಡೆ ಕೋಮು ಗಲಭೆ ಸೃಷ್ಟಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ.[ಬೆಂ-ಮೈ ಜೋಡಿ ಹಳಿಗೆ ಅಡ್ಡಿಯಾದ ಟಿಪ್ಪು ಮದ್ದಿನ ಮನೆ]
ಸರ್ಕಾರ ಜಯಂತಿಯನ್ನು ರದ್ದು ಮಾಡುವುದೇ ಒಳಿತು. ಒಂದು ವೇಳೆ ಜನರ ವಿರೋಧದ ನಡುವೆಯೂ ಆಚರಣೆ ಮಾಡಿದರೆ ಮುಂದಾಗುವ ಎಲ್ಲ ಅನಾಹುತಗಳಿಗೂ ಸರ್ಕಾರ ಕಾರಣವಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.[ಟಿಪ್ಪು ಗೋಹತ್ಯೆ ಮಾಡಿದ ಉಲ್ಲೇಖ ಇತಿಹಾಸದಲ್ಲಿ ಇಲ್ಲ']