ನರೇಂದ್ರ ಮೋದಿ ಭೇಟಿಯಾದ ಯಡಿಯೂರಪ್ಪ
ನವದೆಹಲಿ, ಏಪ್ರಿಲ್ 26 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿನ ಬರ ಪರಿಹಾರ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಯಡಿಯೂರಪ್ಪ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಸೋಮವಾರ
ಸಂಸತ್
ಭವನದಲ್ಲಿ
ಯಡಿಯೂರಪ್ಪ
ಅವರು
ನರೇಂದ್ರ
ಮೋದಿ
ಅವರನ್ನು
ಭೇಟಿ
ಮಾಡಿದರು.
ಕರ್ನಾಟಕ
ಬಿಜೆಪಿ
ಅಧ್ಯಕ್ಷರಾಗಿ
ಆಯ್ಕೆಯಾದ
ಬಳಿಕ
ಇದೇ
ಮೊದಲ
ಬಾರಿಗೆ
ಯಡಿಯೂರಪ್ಪ
ಅವರು
ನರೇಂದ್ರ
ಮೋದಿ
ಅವರನ್ನು
ಭೇಟಿ
ಮಾಡಿದ್ದಾರೆ.
[ಬರಪರಿಹಾರ
ನಿಧಿಗೆ
ಬಿಜೆಪಿ
ಸದಸ್ಯರ
ತಿಂಗಳ
ಸಂಬಳ]
ಪ್ರಧಾನಿ ಭೇಟಿಯ ವೇಳೆ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಯಡಿಯೂರಪ್ಪ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿನ ಬರಪರಿಹಾರ ಕಾಮಗಾರಿಗಳಿಗೆ 723 ಕೋಟಿ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ. [ಏ.27ರಿಂದ ಐದು ದಿನ ಯಡಿಯೂರಪ್ಪ ಬರ ಪ್ರವಾಸ]
ಬಿ.ಎಸ್.ಯಡಿಯೂರಪ್ಪ
ಅವರು
ಏಪ್ರಿಲ್
27ರಿಂದ
ಐದು
ದಿನಗಳ
ಕಾಲ
ಬರ
ಪೀಡಿತ
ಜಿಲ್ಲೆಗಳ
ಪ್ರವಾಸ
ನಡೆಸಲಿದ್ದಾರೆ.
ಈ
ಕುರಿತು
ಸಹ
ಪ್ರಧಾನಿ
ನರೇಂದ್ರ
ಮೋದಿ
ಅವರಿಗೆ
ಯಡಿಯೂರಪ್ಪ
ಅವರು
ಮಾಹಿತಿ
ನೀಡಿದ್ದಾರೆ.
ಪಟ್ಟಿ ಸಿದ್ಧ : ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಅದನ್ನು ನೀಡಿ ಒಪ್ಪಿಗೆ ಪಡೆಯಲಿದ್ದಾರೆ. ಬರ ಪ್ರವಾಸ ಮುಗಿಸಿ ಬಂದ ಬಳಿಕ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.