ನಿಗಮ-ಮಂಡಳಿ ಪಟ್ಟಿ ಇಂದು ಬಹಿರಂಗ
ಬೆಂಗಳೂರು, ನ.24 : ಬಹುನಿರೀಕ್ಷಿತ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಕುರಿತು ಇಂದು ಅಂತಿಮ ಆದೇಶ ಹೊರಬೀಳಲಿದೆ. ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡುವುದಿಲ್ಲ. ಆಯಾ ಇಲಾಖೆಗಳೇ ನೇರವಾಗಿ ಆದೇಶಗಳನ್ನು ಹೊರಡಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಿಗಮ-ಮಂಡಳಿಗಳ
ಅಧ್ಯಕ್ಷ
ಉಪಾಧ್ಯಕ್ಷ
ಸ್ಥಾನಕ್ಕೆ
ಹೆಚ್ಚಿನ
ಆಕಾಂಕ್ಷಿಗಳಿದ್ದಾರೆ.
ಆದ್ದರಿಂದ
ಎಲ್ಲರಿಗೂ
ನ್ಯಾಯ
ಒದಗಿಸಲು
ಸಾಧ್ಯವಾಗುತ್ತಿಲ್ಲ.
ಆದ್ದರಿಂದ
ಅಧಿಕಾರಾವಧಿಯನ್ನು
18
ತಿಂಗಳಿಗೆ
ಸೀಮಿತಗೊಳಿಸಲಾಗಿದೆ
ಎಂದು
ಸಿಎಂ
ಹೇಳಿದ್ದಾರೆ.
[ನಿಗಮ-ಮಂಡಳಿ
ಪಟ್ಟಿ
ಅಂತಿಮ]
ಅಧ್ಯಕ್ಷರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವುದಿಲ್ಲ. ಆಯಾ ಇಲಾಖೆಗಳೇ ನೇರವಾಗಿ ಆದೇಶಗಳನ್ನು ಹೊರಡಿಸಲಿವೆ. ಹೈಕಮಾಂಡ್ ತೀರ್ಮಾನದಂತೆ ಶಾಸಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು. [ಕಾಂಗ್ರೆಸ್ ನಾಯಕನ ಆತ್ಮಹತ್ಯೆ ಯತ್ನ]
ಒಟ್ಟು 95 ನಿಗಮ ಮಂಡಳಿಗಳಿಗೆ ನೇಮಕಮಾಡಲಾಗಿದ್ದು, ಇಂದಿನಿಂದಲೇ ಅಧ್ಯಕ್ಷ-ಉಪಾಧ್ಯಕ್ಷರು ಯಾರು ಎಂಬುದು ತಿಳಿದುಬರಲಿದೆ. ನಿಗಮ ಮಂಡಳಿಗಳ ಸ್ಥಾನಕ್ಕಾಗಿ ಹಲವು ಆಕಾಂಕ್ಷಿಗಳಿದ್ದು, ಪಟ್ಟಿ ಹೊರಬಂದ ಬಳಿಕ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ನಿಗಮ-ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷ ಪಟ್ಟಿಯಲ್ಲಿ ಸ್ಥಾನ ದೊರೆಯದ ಕಾರಣ ಮೈಸೂರಿನ ಕಾಂಗ್ರೆಸ್ ನಾಯಕ ಇಟ್ಟಿಗೆಗೂಡು ಪ್ರದೇಶದ ನಿವಾಸಿ ಪ್ರಭಾಕರ್ (68) ಮತ್ತು ಅವರ ಪುತ್ರ ಪ್ರತಾಪ್ (35) ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.