ಬೆಂಗಳೂರಿಗೆ ಆಗಮಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ
ಬೆಂಗಳೂರು, ಆ, 12 : ದೇವನಹಳ್ಳಿಯಲ್ಲಿ ಅಮಿತ್ ಶಾ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಟೋಲ್ ಗೇಟ್ ಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಅಬ್ ಕೀ ಬಾರ್ ಭಾಜಪ ಸರ್ಕಾರ್' ಎಂಬ ಘೋಷಣೆ ಮಾಡಿದರು.
ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ
ಸಮಯ 10. 45 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೂರು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಳಗ್ಗೆ 10:45ರ ಸುಮಾರಿಗೆ ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದು, ಮುಂದಿನ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಪಕ್ಷದ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.
ಮೂರು ದಿನಗಳ ಅಮಿತ್ ಶಾ ರಾಜ್ಯ ಪ್ರವಾಸದ ವಿವರ
ಶನಿವಾರ ಬೆಳಗ್ಗೆ 10.45ಕ್ಕೆ ಅಮಿತ್ ಶಾ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ನಾಯಕರು ಮತ್ತು ನೂರಾರು ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿರುವ ಅಮಿತ್ ಶಾ ಅವರು 25ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರು, ಆರ್ಎಸ್ಎಸ್ ಪ್ರಮುಖರು, ಪಕ್ಷದ ಹಿತೈಷಿಗಳು ಸೇರಿದಂತೆ ಹಲವರ ಜೊತೆ ಸಭೆ ನಡೆಸಲಿದ್ದಾರೆ.
ಕರ್ನಾಟಕ ಬಿಜೆಪಿ ಈಗಾಗಲೇ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಚುನಾವಣಾ ಸಿದ್ಧತೆ, ಪಕ್ಷದಲ್ಲಿನ ಸಮನ್ವಯತೆ ಮುಂತಾದ ವಿಚಾರಗಳ ಕುರಿತು ಅಮಿತ್ ಶಾ ರಾಜ್ಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.
ಅಮಿತ್ ಶಾ ಇಂದಿನ ಕಾರ್ಯಕ್ರಮಗಳು
*
ಬೆಳಗ್ಗೆ
10.45ಕ್ಕೆ
ವಿಮಾನ
ನಿಲ್ದಾಣಕ್ಕೆ
ಆಗಮನ
*
ಬೆಳಗ್ಗೆ
11
ಗಂಟೆಗೆ
ಟೋಲ್
ಗೇಟ್
ಬಳಿ
ಕಾರ್ಯಕರ್ತರ
ಸ್ವಾಗತ,
ಕಾರ್ಯಕರ್ತರನ್ನು
ಉದ್ದೇಶಿಸಿ
ಭಾಷಣ
*
ಬೆಳಗ್ಗೆ
12
ಗಂಟೆಗೆ
ಬಿಜೆಪಿ
ಕಚೇರಿಗೆ
ಭೇಟಿ,
ಗ್ರಂಥಾಲಯ
ಉದ್ಘಾಟನೆ
*
ಮಧ್ಯಾಹ್ನ
12.30
ಪಕ್ಷದ
ಕಚೇರಿಯಲ್ಲಿ
ಪ್ರಮುಖರ
ಸಮಿತಿ
ಸಭೆ
*
ಮಧ್ಯಾಹ್ನ
2.30
ವಿಧಾನಸಭೆ,
ವಿಧಾನಪರಿಷತ್
ಶಾಸಕರ
ಜೊತೆ
ಸಭೆ
*
ಸಂಜೆ
4
ಗಂಟೆಗೆ
ಪದಾಧಿಕಾರಿಗಳು,
ಮೋರ್ಚಾ
ಅಧ್ಯಕ್ಷರು,
ಜಿಲ್ಲಾಧ್ಯಕ್ಷರ
ಸಭೆ
*
ಸಂಜೆ
6.15
ಸಾಹಿತಿಗಳು,
ವೈದ್ಯರು,
ಇಂಜಿನಿಯರ್ಗಳು,
ಚಿತ್ರನಟರು,
ಸಾಫ್ಟ್ವೇರ್
ತಂತ್ರಜ್ಞರ
ಜೊತೆ
ಸಭೆ