ಕುದುರೆ ವ್ಯಾಪಾರ ತಪ್ಪಿಸಿ, ಬಿಜೆಪಿ ನಾಯಕರ ಮನವಿ
ಬೆಂಗಳೂರು, ಮೇ 26 : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕುದುರೆ ವ್ಯಾಪಾರ ತಡೆಯಲು ಜೂನ್ 5ರೊಳಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಯ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಕರ್ನಾಟಕ ಬಿಜೆಪಿ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದೆ.
ಮಂಗಳವಾರ
ಮಾಜಿ
ಸಚಿವ
ಸುರೇಶ್
ಕುಮಾರ್
ಮತ್ತು
ಸಿಟಿ
ರವಿ
ನೇತೃತ್ವದ
ಬಿಜೆಪಿ
ನಾಯಕರ
ನಿಯೋಗ
ರಾಜ್ಯ
ಚುನಾವಣಾ
ಆಯುಕ್ತ
ಪಿ.ಎನ್.
ಶ್ರೀನಿವಾಸಚಾರಿ
ಅವರನ್ನು
ಭೇಟಿ
ಮಾಡಿ,
ಮೀಸಲಾತಿ
ಪಟ್ಟಿಯನ್ನು
ಜೂ.5ರೊಳಗೆ
ಪ್ರಕಟಿಸಬೇಕು
ಎಂದು
ಮನವಿ
ಸಲ್ಲಿಸಿದರು.
[ಚುನಾವಣೆ
ವೇಳಾಪಟ್ಟಿ]
5,844 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಮೇ 29ರಂದು ಮೊದಲ ಹಂತದ ಮತದಾನವಿದೆ. ಜೂನ್ 2ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಜೂ.5ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. [ಚುನಾವಣೆ ಬಹಿಷ್ಕರಿಸಿದ ಡಿಕೆ ರವಿ ಕುಟುಂಬ]
ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟಗೊಂಡ ತಕ್ಷಣ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗೆ ಪೈಪೋಟಿ ಆರಂಭವಾಗುತ್ತದೆ. ಹಣಬಲವಿರುವ ಪಕ್ಷಗಳು ಸದಸ್ಯರನ್ನು ಖರೀದಿ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೇಗನೇ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಬಿಜೆಪಿ ಮನವಿಯಲ್ಲಿ ತಿಳಿಸಿದೆ.