ಭ್ರಷ್ಟ ಸಚಿವರನ್ನು ತೊಲಗಿಸಿ, ಬಿಜೆಪಿ ಬೃಹತ್ ಪ್ರತಿಭಟನೆ
ಬೆಂಗಳೂರು, ನ.20 : 'ಭ್ರಷ್ಟ ಸಚಿವರನ್ನು ತೊಲಗಿಸಿ, ಕರ್ನಾಟಕ ಉಳಿಸಿ' ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂಬ ಬೇಡಿಕೆ ಮತ್ತು ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಿಎಂ
ಸಿದ್ದರಾಮಯ್ಯ
ನೇತೃತ್ವದ
ಸರ್ಕಾರದ
ವೈಫಲ್ಯಗಳು
ಮತ್ತು
ಭ್ರಷ್ಟಾಚಾರದ
ಆರೋಪ
ಹೊತ್ತಿರುವ
ಸಚಿವರಾದ
ಕೆ.ಜೆ.
ಜಾರ್ಜ್,
ದಿನೇಶ್
ಗುಂಡೂರಾವ್,
ಎಚ್.ಎಸ್.
ಮಹಾದೇವ
ಪ್ರಸಾದ್
ಮತ್ತು
ಖಮರುಲ್
ಇಸ್ಲಾಂ
ಅವರನ್ನು
ಸಂಪುಟದಿಂದ
ಕೈ
ಬಿಡುವಂತೆ
ಒತ್ತಾಯಿಸಿ
ಪ್ರತಿಭಟನೆ
ನಡೆಸಲಾಯಿತು.
ವಿಧಾನಸೌಧದ
ಪೂರ್ವ
ದ್ವಾರದ
ಬಳಿಯ
ಗಾಂಧಿ
ಪ್ರತಿಮೆ
ಬಳಿ
ಬಿಜೆಪಿ
ರಾಷ್ಟ್ರೀಯ
ಉಪಾಧ್ಯಕ್ಷ
ಯಡಿಯೂರಪ್ಪ,
ಪ್ರತಿಪಕ್ಷ
ನಾಯಕ
ಜಗದೀಶ್
ಶೆಟ್ಟರ್,
ಪರಿಷತ್
ವಿಪಕ್ಷ
ನಾಯಕ
ಕೆ.ಎಸ್.
ಈಶ್ವರಪ್ಪ
ನೇತೃತ್ವದಲ್ಲಿ
ಸಂಸದರು,
ಶಾಸಕರು,
ವಿಧಾನ
ಪರಿಷತ್
ಸದಸ್ಯರು
ಪ್ರತಿಭಟನೆ
ನಡೆಸಿ,
ಸರ್ಕಾರದ
ವಿರುದ್ಧ
ಘೋಷಣೆಗಳನ್ನು
ಕೂಗಿದರು.
[ಸರ್ಕಾರದ
ವಿರುದ್ಧ
ಹೋರಾಟ,
ಮೂರು
ಸೂತ್ರ]
ಪ್ರತಿಭಟನೆ
ಉದ್ದೇಶಿಸಿ
ಮಾತನಾಡಿದ
ಜಗದೀಶ್
ಶೆಟ್ಟರ್,
ಸಿಎಂ
ಸಿದ್ದರಾಮಯ್ಯ
ಅವರು
ಸಂಪುಟದಿಂದ
ಭೂಗಳ್ಳರನ್ನು
ಕೈ
ಬಿಡಬೇಕು
ಎಂದು
ಆಗ್ರಹಿಸಿದರು.
ಮಹಿಳೆಯರಿಗೆ
ಮತ್ತು
ಮಕ್ಕಳಿಗೆ
ರಕ್ಷಣೆ
ನೀಡದ
ರಾಜ್ಯ
ಸರ್ಕಾರದ
ವೈಫಲ್ಯವನ್ನು
ಖಂಡಿಸುತ್ತೇವೆ
ಎಂದು
ಹೇಳಿದರು.
ಬಿ.ಎಸ್.ಯಡಿಯೂರಪ್ಪ
ಮಾತನಾಡಿ,
ಸರ್ಕಾರದ
ವಿರುದ್ಧ
ಶಾಸಕರು,
ಸಂಸದರು
ಸೇರಿದಂತೆ
ಬಿಜೆಪಿಯ
ಮುಖಂಡರು
ಒಟ್ಟಾಗಿ
ಪ್ರತಿಭಟನೆ
ನಡೆಸುತ್ತಿದ್ದೇವೆ.
ಮುಖ್ಯಮಂತ್ರಿಗಳು
ನಮ್ಮ
ಅಹವಾಲು
ಸ್ವೀಕರಿಸಿ
ಪರಿಹಾರ
ಕಂಡುಕೊಳ್ಳುವ
ಬದಲು
ಸರ್ವಾಧಿಕಾರಿಯಂತೆ
ವರ್ತಿಸುತ್ತಿರುವುದು
ಸರಿಯಲ್ಲ
ಎಂದು
ಆಕ್ರೋಶ
ವ್ಯಕ್ತಪಡಿಸಿದರು.
[ಕರ್ನಾಟಕದಲ್ಲಿ
ಸರ್ಕಾರ
ಜೀವಂತವಾಗಿಲ್ಲ]
ಪ್ರತಿಭಟನೆ
ಉದ್ದೇಶಿಸಿ
ಮಾತನಾಡಿದ
ಕೆ.ಎಸ್.ಈಶ್ವರಪ್ಪ
ಅವರು,
ಖಮರುಲ್ಲಾ
ಇಸ್ಲಾಂ,
ದಿನೇಶ್
ಗುಂಡೂರಾವ್
,
ಮಹದೇವ
ಪ್ರಸಾದ್,
ಕೆ.ಜೆ.ಜಾರ್ಜ್
ಅವರನ್ನು
ಸಂಪುಟದಿಂದ
ಕೈ
ಬಿಡಬೇಕು.
ಶಾಂತಿಯುತ
ಧರಣಿಗೂ
ಅವಕಾಶ
ನೀಡದ
ಸರ್ಕಾರ
ಅತ್ಯಾಚಾರಿಗಳನ್ನು
ರಕ್ಷಿಸುತ್ತಿದೆ
ಎಂದು
ಆರೋಪಿಸಿದರು.
ವಿಕಾಸಸೌಧ ಮತ್ತು ವಿಧಾನಸೌಧದ ನಡುವಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ನಾಯಕರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ನಾಯಕರನ್ನು ಪೊಲೀಸರು ಬಂಧಿಸಿದರು.
ಇಂದು ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಸಂಸದರಾದ ಕರಡಿ ಸಂಗಣ್ಣ, ಪಿ.ಸಿ.ಮೋಹನ್, ಶಾಸಕರಾದ ಸುರೇಶ್ ಕುಮಾರ್, ಪರಿಷತ್ ಸದಸ್ಯ ಗೋ.ಮಧುಸೂದನ್, ವಿಮಲಾಗೌಡ, ರಾಮಚಂದ್ರಗೌಡ ಮುಂತಾದವರು ಪಾಲ್ಗೊಂಡಿದ್ದರು.