ಕೇರಳದಲ್ಲಿ ಹಕ್ಕಿ ಜ್ವರ, ಕರ್ನಾಟಕದಲ್ಲಿ ಹೈ ಅಲರ್ಟ್
ಬೆಂಗಳೂರು, ನ.26 : ಪಕ್ಕದ ರಾಜ್ಯವಾದ ಕೇರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿಯೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೇರಳದ
ಕೊಟ್ಟಾಯಂ
ಜಿಲ್ಲೆಯಲ್ಲಿ
ಹಕ್ಕಿಜ್ವರ
ಕಾಣಿಸಿಕೊಂಡಿರುವ
ಹಿನ್ನಲೆಯಲ್ಲಿ
ಟಿ.ಬಿ.ಜಯಚಂದ್ರ
ಅವರು
ವಿಧಾನಸೌಧದಲ್ಲಿ
ಮಂಗಳವಾರ
ಜಿಲ್ಲಾಧಿಕಾರಿಗಳ
ಉನ್ನತ
ಮಟ್ಟದ
ಸಭೆ
ನಡೆಸಿದರು.
ರಾಜ್ಯಕ್ಕೆ
ಹಕ್ಕಿ
ಜ್ವರ
ಹರಡದಂತೆ
ಮುನ್ನೆಚ್ಚರಿಕೆ
ಕೈಗೊಳ್ಳಬೇಕು
ಗಡಿ
ಭಾಗದ
ಜಿಲ್ಲೆಗಳ
ಅಧಿಕಾರಿಗಳಿಗೆ
ನಿರ್ದೇಶ
ನೀಡಿದರು.
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಯಚಂದ್ರ ಅವರು, ಕರ್ನಾಟಕದಲ್ಲಿ ಎಲ್ಲಿಯೂ ಹಕ್ಕಿಜ್ವರ ಕಾಣಿಸಿಕೊಂಡಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕರ್ನಾಟಕ
ರಾಜ್ಯಕ್ಕೆ
ಕೇರಳದಿಂದ
ಮೊಟ್ಟೆ
ಅಥವಾ
ಕೋಳಿ
ಪೂರೈಕೆಯಾಗುವುದಿಲ್ಲ.
ಆದ್ದರಿಂದ
ಹಕ್ಕಿಜ್ವರ
ಹಬ್ಬುವ
ಸಾಧ್ಯತೆ
ಕಡಿಮೆ.
ಇದು
ವೈರಸ್ನಿಂದ
ಬರುವ
ರೋಗವಾಗಿದ್ದರಿಂದ
ಅದನ್ನು
ತಡೆಗಟ್ಟಲು
ಕ್ರಮ
ಕೈಗೊಳ್ಳಲಾಗುತ್ತಿದೆ
ಎಂದು
ವಿವರಣೆ
ನೀಡಿದರು.
ಕೇರಳ ಗಡಿ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ ಮತ್ತು ಕೊಡಗು ಹಾಗೂ ಹಕ್ಕಿಗಳು ಹೆಚ್ಚಾಗಿ ವಲಸೆ ಬರುವ ಪ್ರದೇಶಗಳಲ್ಲಿ ಎಚ್ಚರದಿಂದ ಇರುವಂತೆ ಅರಣ್ಯ ಇಲಾಖೆ ಮತ್ತು ಇತರ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ವಲಸೆ ಬರುವ ಹಕ್ಕಿಗಳ ಹಿಕ್ಕೆ ಸೇರಿದಂತೆ ವಿವಿಧ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸುವಂತೆ ಸೂಚಿಸಲಾಗಿದೆ ಎಂದರು.
ಕೇರಳದಿಂದ ಕರ್ನಾಟಕಕ್ಕೆ ಕೋಳಿಗೊಬ್ಬರ ಪೂರೈಕೆಯಾಗದಂತೆ ತಡೆಯಲು ಗಡಿಭಾಗದಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗುತ್ತದೆ. ಪಶುಸಂಗೋಪನಾ ಇಲಾಖೆ ಜೊತೆಗೆ ಆರೋಗ್ಯ ಮತ್ತು ಅರಣ್ಯ ಇಲಾಖೆಗಳು ಹಕ್ಕಿ ಜ್ವರ ತಡೆಗೆ ಸಹಕಾರ ನೀಡುವಂತೆ ಕೋರಲಾಗಿದೆ ಎಂದು ಜಯಚಂದ್ರ ಅವರು ವಿವರಿಸಿದರು.
ಅಂದಹಾಗೆ ಕೇರಳದ ಆಲಪ್ಪುಳ, ಕೊಟ್ಟಾಯಂ, ಪಟ್ಟಣಾಂತಿಟ್ಟ ಜಿಲ್ಲೆಗಳಲ್ಲಿ ಕೋಳಿ ಜ್ವರ ಕಾಣಿಸಿಕೊಂಡಿದ್ದು, ಕೇರಳ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಮೂರು ಜಿಲ್ಲೆಗಳಲ್ಲಿ 1.5 ಲಕ್ಷ ಕೋಳಿಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದೆ.