ದೇಶ ವಿದೇಶದ ಹಕ್ಕಿಗಳ ನೋಡಲು ಗದಗಕ್ಕೆ ಬನ್ನಿ
ಗದಗ, ಜೂನ್ 2: ಸ್ಥಳೀಯ ಮಾಗಡಿ ಕೆರೆಗೆ ವಿದೇಶಗಳಿಂದ ಬರುವ ಹಕ್ಕಿಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಹಕ್ಕಿ ಹಬ್ಬ ಆಯೋಜಿಸಲಾಗುವುದು ಹಾಗೂ ಮಾಗಡಿ ಕೆರೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ತಿಳಿಸಿದರು.
ಅವರು
ಬಿಂಕದಕಟ್ಟಿ
ಅರಣ್ಯ
ಅತಿಥಿ
ಗೃಹದಲ್ಲಿ
ಬುಧವಾರ
ಸುದ್ದಿಗೋಷ್ಠಿಯಲ್ಲಿ
ಮಾತನಾಡಿ,
ಮಾಗಡಿ
ಕೆರೆಗೆ
ದೇಶ
ವಿದೇಶಗಳಿಂದ
ಪಕ್ಷಿಗಳು
ಆಗಮಿಸುವ
ಹಿನ್ನಲೆಯಲ್ಲಿ
ಕಳೆದ
ವರ್ಷ
ದಾಂಡೇಲಿಯಲ್ಲಿ
ಹಮ್ಮಿಕೊಳ್ಳಲಾದ
ಹಕ್ಕಿ
ಹಬ್ಬವನ್ನು
ಜಿಲ್ಲೆಯಲ್ಲಿಯೂ
ಆಯೋಜಿಸಲಾಗುವುದು.
ಈ
ಸಂದರ್ಭದಲ್ಲಿ
ದೇಶ
ವಿದೇಶಗಳಿಂದ
ಪಕ್ಷಿ
ಛಾಯಾಗ್ರಾಹಕರು
ಆಗಮಿಸುವವರಿದ್ದು
ಇದಕ್ಕೆ
ಬೇಕಾದಂತಹ
ಸೌಲಭ್ಯಗಳಿಗಾಗಿ
ಕ್ರಮ
ಕೈಗೊಳ್ಳಲಾಗುವುದು
ಎಂದರು.
[ಕಳಸಾ-ಬಂಡೂರಿ
ಹೋರಾಟ
ಎಲ್ಲಿಗೆ
ಬಂತು?]
ಮಾಗಡಿ ಕೆರೆಯ ಹೂಳೆತ್ತುವ ಕಾರ್ಯ ಈಗಾಗಲೇ ಪ್ರಾರಂಭಗೊಂಡಿದ್ದು, ಕೆರೆಗೆ ವಲಸೆ ಬರುವ ಪಕ್ಷಿಗಳ ಸಂರಕ್ಷಣೆಗೆ, ಅರಣ್ಯ ಪ್ರದೇಶ ಸುಂದರೀಕರಣಕ್ಕೆ ಬೇಕಾಗುವ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಿ ಒಟ್ಟಾರೆಯಾಗಿ ಮಾಗಡಿ ಕೆರೆಯನ್ನು ಒಂದು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಲು ಸರ್ವ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕಪ್ಪತ್ತಗುಡ್ಡ ಅರಣ್ಯ ಪ್ರದೇಶವು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲಾಗಿದ್ದು ಈ ಅರಣ್ಯ ಪ್ರದೇಶ ಸಂರಕ್ಷಣೆಗೆ, ಮಳೆಯ ನೀರು ಹರಿದುಹೋಗುವದನ್ನು ತಡೆಯಲು ಹಾಗೂ ಜನರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಭೆಯನ್ನು ಕರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.[ಕೃಷಿ ತಜ್ಞ ಗದಗದ ಭರಮಗೌಡ್ರ ಹೆಸರಲ್ಲಿ ಪ್ರತಿಷ್ಠಾನ]
ಮಕ್ಕಳಲ್ಲಿ ಪರಿಸರ ಪ್ರಜ್ಞೆ ಹೆಚ್ಚಿಸುವ ನಿಟ್ಟಿನಲ್ಲಿ ಈ ವರ್ಷ ಪ್ರೌಢ ಶಾಲಾ ಮಕ್ಕಳಿಗಾಗಿ ಚಿಣ್ಣರ ವನದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜುಲೈ 2 ರಿಂದ 10ರ ವರೆಗೆ ಒಂದು ವಾರದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅರಣ್ಯ ಹಕ್ಕು ಕಾಯ್ದೆ: ಅರಣ್ಯ ಹಕ್ಕು ಕಾಯ್ದೆ ಒಂದು ಮಹತ್ವಾಕಾಂಕ್ಷೆ ಕಾಯ್ದೆಯಾಗಿದ್ದು ಇದುವರೆಗೆ ಹಕ್ಕು ಪತ್ರಕ್ಕಾಗಿ ಸಲ್ಲಿಸಿದ ಅರ್ಜಿಗಳಲ್ಲಿ ತಿರಸ್ಕೃತಗೊಂಡ ಅರ್ಜಿಗಳ ಸಂಖ್ಯೆ ಹೆಚ್ಚಾಗಿವೆ. ಕೇಂದ್ರ ಸರಕಾರದ ಮಾರ್ಗಸೂಚಿಗಳನ್ವಯ ಹಕ್ಕು ಪತ್ರ ವಿತರಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದರು.[ಲಕ್ಕುಂಡಿಯಲ್ಲಿ ಬೌದ್ಧ ಧರ್ಮದ ಶಾಸನ ಪತ್ತೆ]
ಜಿಲ್ಲೆಯಲ್ಲಿ ಇದುವರೆಗೆ ಹಕ್ಕು ಪತ್ರಕ್ಕಾಗಿ 1047 ಅರ್ಜಿ ಸ್ವೀಕರಿಸಲಾಗಿದ್ದು 378 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ ಎಂದು ನುಡಿದರು. ಬಿಂಕದಕಟ್ಟಿ ಕಿರು ಮೃಗಾಲಯದ ಅಭಿವೃದ್ಧಿಗಾಗಿ ಮೃಗಾಲಯ ಪ್ರಾಧಿಕಾರದಿಂದ ಕ್ರಮ ಜರುಗಿಸಲಾಗುವುದು ಎಂದು ಸಚಿವ ರಮಾನಾಥ ರೈ ತಿಳಿಸಿದರು.[ಹಕ್ಕಿ ಜ್ವರದ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ]
ಇದಕ್ಕೂ ಮೊದಲು ಸಚಿವರು ಮಾಗಡಿ ಕೆರೆ, ಕಪ್ಪತ್ತಗುಡ್ಡ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ ಸಂಸದೀಯ ಕಾರ್ಯದರ್ಶಿ ಹಾಗೂ ವಿಧಾನ ಸಭೆ ಸದಸ್ಯ ರಾಮಕೃಷ್ಣ ದೊಡಮನಿ, ರೋಣ ವಿಧಾನ ಸಭೆ ಸದಸ್ಯ ಜಿ.ಎಸ್.ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಜಿ.ಎಸ್.ಗಡ್ಡದೇವರಮಠ ಇದ್ದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯ ಜೀವಿ) ಬಿ.ಜಿ.ಹೊಸಮಠ, ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಗೌಡರ ಧಾರವಾಢ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನೀಲಕುಮಾರ ರತನ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗಾಮನಗಟ್ಟಿ ಸಚಿವರ ಜತೆ ಇದ್ದರು.