ಬಿಳಿಗಿರಿ ರಂಗನಬೆಟ್ಟದ ಬ್ರಹ್ಮರಥೋತ್ಸವಕ್ಕೆ ಆಹ್ವಾನ
ಚಾಮರಾಜನಗರ, ಏ.30: ಯಳಂದೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿಯವರ ಬ್ರಹ್ಮ ರಥೋತ್ಸವ ಮೇ 3ರಂದು ಬೆಳಿಗ್ಗೆ 10.20 ರಿಂದ 10.30ರೊಳಗೆ ನಡೆಯಲಿದೆ.
ಜಾತ್ರಾ ಮಹೋತ್ಸವ ಏ.29ರಿಂದಲೇ ಆರಂಭಗೊಂಡಿದೆ. ಏ.29ರಂದು ಹಗಲು ಪಲ್ಲಕ್ಕಿ ಉತ್ಸವ, ರಾತ್ರಿ ಹಂಸವಾಹನ, ಏ. 30ರಂದು ಹಗಲು ಪಲ್ಲಕ್ಕಿ ಉತ್ಸವ ರಾತ್ರಿ ಪುಷ್ಪ ಮಂಟಪೋತ್ಸವ ಇದೆ.
ಮೇ
1ರಂದು
ಹಗಲು
ಪಲ್ಲಕ್ಕಿ
ಉತ್ಸವ
ರಾತ್ರಿ
ಗರಡೋತ್ಸವ,
ಮೇ
2ರಂದು
ಹಗಲು
ಪಲ್ಲಕ್ಕಿ
ಉತ್ಸವ
ಸಂಜೆ
7ಕ್ಕೆ
ಸಿಂಹ
ವಾಹನ,
ಗಜೇಂದ್ರ
ಮೋಕ್ಷ,
ಆನೆ
ವಾಹನ
ಉತ್ಸವಾದಿಗಳು
ನೆರವೇರಲಿದೆ.
[ಬನ್ನಿ
ಬಿಳಿಗಿರಿರಂಗನ
ಬೆಟ್ಟಕ್ಕೆ...ನಿಸರ್ಗದ
ಸ್ವರ್ಗಕ್ಕೆ]
ಬ್ರಹ್ಮರಥೋತ್ಸವ : ಮೇ 3ರಂದು ಬೆಳಿಗ್ಗೆ 5 ಗಂಟೆಗೆ ಕಲ್ಯಾಣೋತ್ಸವ, 7 ಗಂಟೆಗೆ ಪ್ರಸ್ಥಾನ ಮಂಟಪೋತ್ಸವ ನಡೆಯಲಿದೆ. 10.20 ರಿಂದ 10.30 ಗಂಟೆಯೊಳಗೆ ರಥಾರೋಹಣ ನಂತರ ಶ್ರೀಮಾನ್ ಮಹಾರಥೋತ್ಸವ ನಡೆಯಲಿದೆ. ನಂತರ ಮಂಟಪೋತ್ಸವಗಳು, ರಾತ್ರಿ ತೇರಡಿ ಉತ್ಸವ, ಆಂಜನೇಯರೋಹಣ ಮಹೋತ್ಸವ ಜರುಗಲಿದೆ. [ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಿರುಪರಿಚಯ]
* ಮೇ 4ರಂದು ಹಗಲು ಗರುಡೋತ್ಸವ, ಸಂಜೆ 5 ಗಂಟೆಗೆ ರಾಸಕ್ರೀಡೋತ್ಸವ, ಪ್ರಹ್ಲಾದೋತ್ಸವ, ರಾತ್ರಿ 8.30 ಗಂಟೆಗೆ ಶಾಂತ್ಯುತ್ಸವ, ಮಂಟಪೋತ್ಸವ, ಶಯನೋತ್ಸವ ಸೇವೆ.
* ಮೇ 5ರಂದು ಬೆಳಿಗ್ಗೆ ಗರುಡೋತ್ಸವ, ವೈಯಾಳಿ ಉತ್ಸವ, ಅವಭೃತ ಮಂಗಳಸ್ನಾನ, ಸಂಜೆ ಧಜಾ ಅವರೋಹಣ ಅನಂತರ ನರಾಂದೋಳಿ ಕಾರೋಹಣ ಮಹೋತ್ಸವ ನಡೆಯಲಿದೆ.[ಶಾಪ ವಿಮೋಚನೆ ಮಾಡಿದ ಸಿಎಂ ಸಿದ್ದರಾಮಯ್ಯ]
* ಮೇ 6ರಂದು ರಾತ್ರಿ ರಂಗನಾಥನಿಗೆ ಗಂಧಾಭಿಷೇಕ, ಅಮ್ಮನವರಿಗೆ ಹರಿದ್ರಾಕುಂಕುಮಚೂರ್ಣ ಅಲಂಕಾರ ಮಹೋತ್ಸವ, ದ್ವಾದಶ ತಿರುವಾರಾಧನೆ ಪುಷ್ಪ ಯಾಗೋತ್ಸವ ಚಂದ್ರಮಂಡಲೋತ್ಸವ, ಮಂಟಪೋತ್ಸವ, ಮಹಾಮಂಗಳಾರತಿ ಬಳಿಕ 12 ಪ್ರಾಕಾರ ಉತ್ಸವಗಳು ನೆರವೇರಲಿದೆ. [ಚಾಮರಾಜನಗರ-ಬೆಂಗಳೂರು ನಡುವೆ ಹೊಸ ರೈಲು]
* ಮೇ 7ರಂದು ಬೆಳಿಗ್ಗೆ ಮಹಾಭಿಷೇಕ ಮಹೋತ್ಸವ ನಂತರ ಮಹಾಪ್ರಸಾದ ವಿನಿಯೋಗವಾಗಲಿದೆ.
* ಮೇ 8ರಂದು ಆಯಾಸ ಪರಿಹಾರ ರೂಪಕೋಟೆ ತಿರುನಾಡೆಂಬ ವೈಮಾಳಿಹೆ ಉತ್ಸವ ನಡೆಯಲಿದೆ.
* ಮೇ9 ಹಾಗೂ 10ರಂದು ಸಹ ವೈಮಾಳಿಹೆ ಉತ್ಸವ ನಡೆಯಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. [ನಟರಾಜುವಿನ ಕನ್ನಡಾಭಿಮಾನಕ್ಕೆ ಸಾಷ್ಟಾಂಗ ನಮಸ್ಕಾರ]
ಬಿಳಿಗಿರಿರಂಗನಬೆಟ್ಟವನ್ನು ಶ್ವೇತಾದ್ರಿ ಬಿಳಿಕಲ್ಲು ಬೆಟ್ಟ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ವನ್ಯಧಾಮ, ಅಪರೂಪದ ಸಸ್ಯಕ್ಷೇತ್ರವನ್ನು ಸ್ಥಳೀಯ ಮೂಲ ನಿವಾಸಿಗಳಾದ ಸೋಲಿಗರು ಹಲವಾರು ವರ್ಷಗಳಿಂದ ಕಾಯುತ್ತಾ ಬಂದಿದ್ದಾರೆ. ಇಲ್ಲಿನ ದೈವ ಬಿಳಿಗಿರಿ ರಂಗನಾಥಸ್ವಾಮಿ ಕೂಡಾ ಸೋಲಿಗರ ಅಳಿಯ ಎಂಬುದನ್ನು ಇಲ್ಲಿ ಸ್ಮರಿಸಬಹುದು.[ಚಿತ್ರಕೃಪೆ: ದೇಗುಲದ ಮಾಹಿತಿಗೆ ಈ ವೆಬ್ ತಾಣ ಕ್ಲಿಕ್ ಮಾಡಿ]