ರಾಮನಗರ : ಸ್ವಾಮೀಜಿ ಕಾರು ಡಿಕ್ಕಿ, ಪಾದಚಾರಿ ಸಾವು
ರಾಮನಗರ, ಫೆಬ್ರವರಿ 02 : ಸ್ವಾಮೀಜಿಯೊಬ್ಬರ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಾಗಡಿ ಬಳಿ ನಡೆದಿದೆ. ಅಪಘಾತದ ಬಳಿಕ ಸ್ವಾಮೀಜಿ ಕಾರು ಬಿಟ್ಟು ಪರಾರಿಯಾಗಿದ್ದು, ಕುದೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಾಗಡಿ
ತಾಲೂಕಿನ
ಬಂಡೆ
ಮಠದ
ಶ್ರೀ
ಬಸವಲಿಂಗ
ಸ್ವಾಮೀಜಿ
ಅವರ
ಕಾರು
ಮಂಗಳವಾರ
ಬೆಳಗ್ಗೆ
ಕಕ್ಕೇಪಾಳ್ಯ
ಬಳಿ
ಬೈಕ್
ಸವಾರನಿಗೆ
ಡಿಕ್ಕಿ
ಹೊಡೆದಿದೆ.
ಬೈಕ್ನಲ್ಲಿದ್ದ
ಕುಮಾರಸ್ವಾಮಿ
(45)ಸ್ಥಳದಲ್ಲಿಯೇ
ಸಾವನ್ನಪ್ಪಿದ್ದಾರೆ.
ಅಪಘಾತದ
ಬಳಿಕ
ಸ್ವಾಮೀಜಿ
ಕಾರು
ಬಿಟ್ಟು
ಪರಾರಿಯಾಗಿದ್ದಾರೆ.
[ಅಪಘಾತದಲ್ಲಿ
ಮೃತಪಟ್ಟ
ಟೆಕ್ಕಿ
ದೇಹ
ಆಸ್ಪತ್ರೆಗೆ
ದಾನ]
ಅಪಘಾತವಾದ ಸಂದರ್ಭದಲ್ಲಿ ಬಸವಲಿಂಗ ಸ್ವಾಮೀಜಿ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸ್ವಾಮೀಜಿ ಕಾರನ್ನು ಬಿಟ್ಟು ಮಠಕ್ಕೆ ವಾಪಸ್ ಹೋಗಿರಬಹುದು ಎಂದು ತಿಳಿದುಬಂದಿದೆ.
ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಕುಮಾರಸ್ವಾಮಿ ಅವರು ಅಂಗಡಿಗೆ ಬರುವಾಗ ಈ ಅಪಘಾತ ನಡೆದಿದೆ. ಕುದೂರು ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ಸ್ವಾಮೀಜಿ ಅವರೇ ಕಾರು ಓಡಿಸುತ್ತಿದ್ದರೆ ಎಂದು ತಿಳಿದುಬರಲಿದೆ.