ಗಿರಿನಗರದಲ್ಲಿ ಸಿಐಡಿಯಿಂದ ರಾಘವೇಶ್ವರ ಶ್ರೀ ವಿಚಾರಣೆ
ಬೆಂಗಳೂರು, ಸೆಪ್ಟೆಂಬರ್. 10: ಎರಡು ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಯನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಬೆಂಗಳೂರಿನ ಗಿರಿನಗರ ಶಾಖಾ ಮಠದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಸ್ವಾಮೀಜಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.
ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಕಳೆದ ವರ್ಷ ನೀಡಿದ ದೂರು ಮತ್ತು ಯಕ್ಷಗಾನ ಕಲಾವಿದೆಯೊಬ್ಬರು ಗಿರಿನಗರ ಠಾಣೆಯಲ್ಲಿ ದಾಖಲಿಸಿದ ದೂರು ಎರಡನ್ನು ಸಿಬಿಐ ವಿಚಾರಣೆಗೆ ತೆಗೆದುಕೊಂಡಿದೆ.[ರಾಘವೇಶ್ವರ ಸ್ವಾಮೀಜಿ ಮೇಲಿನ 2 ಪ್ರಕರಣ ಸಿಐಡಿಗೆ]
ರಾಘವೇಶ್ವರ ಸ್ವಾಮೀಜಿ ಬಂಧನಕ್ಕೆ ಒತ್ತಾಯಿಸಿ ವಿವಿಧ ಮಹಿಳಾ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದವು. ಸ್ವಾಮೀಜಿಗೆ 30 ದಿನಗಳ ನೀರಿಕ್ಷಣಾ ಜಾಮೀನನ್ನು ನ್ಯಾಯಾಲಯ ನೀಡಿತ್ತು. [ರಾಘವೇಶ್ವರ ಸ್ವಾಮೀಜಿ ಬಂಧನಕ್ಕೆ ಸಂಘಟನೆಗಳ ಒತ್ತಾಯ]
ಗೃಹಸಚಿವ ಕೆ ಜೆ ಜಾರ್ಜ್ ಸಹ ಎರಡು ಪ್ರಕರಣಗಳನ್ನು ಸಿಐಡಿ ಅಧಿಕಾರಿಗಳೇ ತನಿಖೆ ಮಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಯಕ್ಷಗಾನ ಕಲಾವಿದೆ ವಿ ಎಸ್ ಉಗ್ರಪ್ಪ ಅವರಿಗೂ ಜನವಾದಿ ಮಹಿಳಾ ಸಂಘಟನೆ ನೆರವಿನೊಂದಿಗೆ ಮನವಿ ಮಾಡಿಕೊಂಡಿದ್ದರು.