ಬೆಂ-ಮೈಸೂರು 6 ಪಥದ ರಸ್ತೆ, ಭೂ ಸ್ವಾಧೀನ ಆರಂಭ
ಬೆಂಗಳೂರು, ಏಪ್ರಿಲ್ 07 : ಬಹುನಿರೀಕ್ಷಿತ ಬೆಂಗಳೂರು-ಮೈಸೂರು ನಡುವಿನ 6 ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಸ್ವಾಧೀನ ಆರಂಭವಾಗಿದೆ. ಜೂನ್ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಆಗಸ್ಟ್ನಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಸಿಗಲಿದೆ.
ಬುಧವಾರ
ಲೋಕೋಪಯೋಗಿ
ಸಚಿವ
ಡಾ.ಎಚ್.ಸಿ.ಮಹದೇವಪ್ಪ
ಅವರು
ಈ
ಕುರಿತು
ವಿವರ
ನೀಡಿದ್ದಾರೆ.
'ಭೂಸ್ವಾಧೀನಕ್ಕಾಗಿ
2,400
ಕೋಟಿ
ವೆಚ್ಚ
ಮಾಡಲಾಗುತ್ತಿದೆ.
ರಸ್ತೆ
ನಿರ್ಮಾಣಕ್ಕೆ
3,750
ಕೋಟಿ
ವೆಚ್ಚವಾಗುವ
ನಿರೀಕ್ಷೆ
ಇದೆ'
ಎಂದು
ಸಚಿವರು
ಹೇಳಿದರು.
[ಬೆಂಗಳೂರು-ಮೈಸೂರು
ನಡುವೆ
6
ಪಥದ
ರಸ್ತೆ]
'ಬೆಂಗಳೂರಿನ ಜ್ಞಾನಭಾರತಿ ಜಂಕ್ಷನ್ನಿಂದ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗಳ ತನಕ ಒಟ್ಟು 117 ಕಿ.ಮೀ. ಉದ್ದದ ಆರು ಪಥದ ರಸ್ತೆ ನಿರ್ಮಾಣವಾಗಲಿದೆ. ರಸ್ತೆಯ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ಇರುತ್ತದೆ. ಪ್ರಮುಖ ರಸ್ತೆ ಬಳಸಿದರೆ ಟೋಲ್ ಕಟ್ಟಬೇಕು, ಸರ್ವೀಸ್ ರಸ್ತೆ ಬಳಕೆ ಉಚಿತವಾಗಿದೆ' ಎಂದು ಸಚಿವರು ತಿಳಿಸಿದರು. [ಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿ]
ಬೈಪಾಸ್, ಮೇಲ್ಸೇತುವೆ : ಆರುಪಥದ ರಸ್ತೆ ನಿರ್ಮಿಸುವಾಗ ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬೈಪಾಸ್ ನಿರ್ಮಾಣ ಮಾಡಲಾಗುತ್ತದೆ. ಮದ್ದೂರು ಸಮೀಪ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ. [ಬಳ್ಳಾರಿ-ಹೊಸಪೇಟೆ 4 ಪಥದ ರಸ್ತೆಗೆ ಕೇಂದ್ರದ ಒಪ್ಪಿಗೆ]
ಯೋಜನೆಯಲ್ಲಿ ಸ್ವಲ್ಪ ಬದಲಾವಣೆ : ಆರುಪಥದ ರಸ್ತೆ ನಿರ್ಮಾಣ ಕಾಮಗಾರಿಯ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಮೊದಲು ಜ್ಞಾನಭಾರತಿ ಜಂಕ್ಷನ್ನಿಂದ ನೈಸ್ ರಸ್ತೆ ವರೆಗೆ ಫ್ಲೈ ಓವರ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅಲ್ಲಿ ನಮ್ಮ ಮೆಟ್ರೋ ಮೇಲ್ಸೇತುವೆ ಬರುವುದರಿಂದ ಆ ಯೋಜನೆಯನ್ನು ಕೈಬಿಡಲಾಗಿದೆ.
ಹೆಚ್ಚಿನ ಪರಿಹಾರ : ಈ ಯೋಜನೆಗಾಗಿ ಭೂಸ್ವಾಧೀನಕ್ಕೆ ಗಡಿ ಗುರುತಿಸುವ ಕಾರ್ಯ ಆರಂಭವಾಗಿದೆ. 40 ಕಿ.ಮೀ.ತನಕ ಗಡಿ ಗುರುತಿಸಲಾಗಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪರಿಹಾರ ನೀಡುತ್ತಿರುವುದರಿಂದ ರೈತರು ಭೂಸ್ವಾಧೀನಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ.