ಕೆಪಿಎಸ್ಸಿ ಮರುಪರೀಕ್ಷೆ ನಡೆಸಲು ಸರ್ಕಾರಕ್ಕೆ ಡೆಡ್ಲೈನ್
ಬೆಂಗಳೂರು, ಮೇ 23: ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಪ್ರತಿಭಟನೆಗೆ ನಾಂದಿ ಹಾಡಿದ್ದ ಪ್ರಥಮ ದರ್ಜೆ ಸಹಾಯಕರ ನೇಮಕಾತಿ (ಎಫ್ ಡಿ ಎ)ಪರೀಕ್ಷೆ ಬರೆದವರು ಸೋಮವಾರ ನಗರದಲ್ಲಿ ತಮ್ಮ ಆಕ್ರೋಶ ಹೊರಹಾಕಿದರು.
ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.['ಕೆಪಿಎಸ್ಸಿ ಅಧ್ಯಕ್ಷರಾಗಲು ಶ್ಯಾಂ ಭಟ್ ಅರ್ಹ ವ್ಯಕ್ತಿಯಲ್ಲ']
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರೆ ಕೆ ಪಿ ಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಇದ್ದಾರೆ. ಆರೋಪಿಗಳ ಜಾಡು ಹುಡುಕುವಲ್ಲಿ ಸರ್ಕಾರ ನಿರ್ಲಜ್ಜ ಭಾವನೆ ತಾಳಿದೆ. ಇದಕ್ಕೆಲ್ಲ ಉತ್ತರ ನೀಡುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.[ಕನ್ನಡದಲ್ಲೇ ಯುಪಿಎಸ್ಸಿ ಬರೆದ ಭೈರಪ್ಪ ಸಂದರ್ಶನ]
ಅಭ್ಯರ್ಥಿಗಳ
ಬೇಡಿಕೆಗಳೇನು?
*
ಸರ್ಕಾರದ
ಸ್ಪರ್ಧಾತ್ಮಕ
ಪರೀಕ್ಷೆಗಳ
ಬಗ್ಗೆ
ಅನುಮಾನ
ಕಾಡುತ್ತಿದೆ.
*
ಎಫ್
ಡಿ
ಎ
ಪರೀಕ್ಷಾ
ಪತ್ರಿಕೆಗಳು
ಲೀಕ್
ಆಗಿರುವ
ಬಗ್ಗೆ
ಮಾಹಿತಿಯಿದೆ.
*
ಸರ್ಕಾರ
ಕೂಡಲೇ
ಮರು
ಪರೀಕ್ಷೆ
ನಡೆಸಲು
ಕ್ರಮ
ತೆಗೆದುಕೊಳ್ಳಬೇಕು.
*
ಕೆಲವೆಡೆ
ಸಾಮೂಹಿಕ
ನಕಲು
ನಡೆದಿರುವ
ಮಾಹಿತಿಯಿದ್ದು
ಅಕ್ರಮದ
ಗೂಡಾಗಿರುವ
ಪರೀಕ್ಷೆ
ರದ್ದು
ಮಾಡಿ
ವ್ಯವಸ್ಥಿತವಾಗಿ
ನಡೆಸಬೇಕು.
*
ದಿನಾಂಕ
ನಿಗದಿ
ಮಾಡಿ
ಅಭ್ಯರ್ಥಿಗಳಿಗೆ
ಪುನಃ
ಬರೆಯುವ
ಅವಕಾಶ
ಕಲ್ಪಿಸಿ
ಕೊಡಬೇಕು.
*
ಇಲ್ಲವಾದಲ್ಲಿ
ಮುಂದಿನ
ದಿನಗಳಲ್ಲಿ
ಬೀದಿಗಿಳಿದು
ಉಗ್ರ
ಹೋರಾಟ
ನಡೆಸಬೇಕಾಗುತ್ತದೆ
ಎಂದು
ಪ್ರತಿಭಟನಾಕಾರರು
ಎಚ್ಚರಿಕೆ
ನೀಡಿದರು.
*
ಅಕ್ಟೋಬರ್
10,
2015
ರಂದು
ನಡೆದ
ಪರೀಕ್ಷೆಯ
ಪತ್ರಿಕೆ
ಸೋರಿಕೆಯಾಗಿದ್ದ
ಬಗ್ಗೆ
ಸಾಕಷ್ಟು
ವರದಿಗಳು
ಬಂದಿವೆ.
ಆದರೂ
ಸರ್ಕಾರ
ಹಳೆಯ
ಪರೀಕ್ಷೆಯನ್ನೇ
ಮಾನ್ಯ
ಮಾಡಲು
ಮುಂದಾಗಿದೆ
ಎಂದು
ಆರೋಪ
ಮಾಡಿದರು.