'ಲೋಕಾಯುಕ್ತ ಉಳಿಸಿ' ಆಮ್ ಆದ್ಮಿ ವೀಲ್ ಚೇರ್ ಪ್ರತಿಭಟನೆ
ಬೆಂಗಳೂರು, ಏಪ್ರಿಲ್, 06: ಲೋಕಾಯುಕ್ತ ನಿರ್ಮೂಲನೆ ಮಾಡಿ , ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಮಾಡಿರುವ ಕರ್ನಾಟಕ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿತು.
ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಕಾರ್ಯಕರ್ತರು ವೀಲ್ ಚೇರ್ ನಲ್ಲಿ ವಿಧಾನಸೌಧ ಮತ್ತು ಸಿಎಂ ಕಚೇರಿ ಕಡೆ ಮುನುಗ್ಗಲು ಮುಂದಾದಾಗ ಅವರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಪೊಲೀಸರೊಂದಿಗಿನ ಚಕಮಕಿಯಲ್ಲಿ ಕಾರ್ಯಕರ್ತರಿಗೆ ಗಾಯಗಳಾದವು.
ಲೋಕಾಯುಕ್ತ ಉಳಿಸಿ ಎಂದು ಹೋರಾಟ ಮಾಡುತ್ತಿದ್ದ ಕಾರ್ಯಕರ್ತರಿಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬೆಂಬಲ ನೀಡಿದ್ದರು.[ದೆಹಲಿಯಲ್ಲಿ ಎಸ್ ಎಂ ಕೃಷ್ಣ 'ಪಾಂಚಜನ್ಯ', ಅಡಕತ್ತರಿಯಲ್ಲಿ ಸಿದ್ದು]
ಭಾರತ ದೇಶದಲ್ಲೇ ಅತ್ಯಂತ ಶಕ್ತಿಶಾಲಿ ಭ್ರಷ್ಟಾಚಾರ ವಿರೋಧಿ ಹಾಗೂ ನಿಗ್ರಹ ಸಂಸ್ಥೆಯಾಗಿದ್ದ ಕರ್ನಾಟಕ ಲೋಕಾಯುಕ್ತವನ್ನು ಸಂಪೂರ್ಣವಾಗಿ ಮುಗಿಸಿ, ಇಡೀ ರಾಜ್ಯದಲ್ಲಿ ಭ್ರಷ್ಟರ ವಿರುದ್ಧ ಧ್ವನಿ ಎತ್ತದಂತೆ ಮಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ನಮ್ಮ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ
ಲೋಕಾಯುಕ್ತವನ್ನು
ಬಲಪಡಿಸಿ,
ಲೋಕಾಯುಕ್ತ
ಸ್ಥಾನಕ್ಕೆ
ಪ್ರಾಮಾಣಿಕರನ್ನು
ನೇಮಿಸಲು
ಜನರು
ನಡೆಸುತ್ತಿರುವ
ಹೋರಾಟವನ್ನು
ಮುಗಿಸಿಹಾಕಲು,
ಇಡೀ
ಲೋಕಾಯುಕ್ತ
ಸಂಸ್ಥೆಯನ್ನೇ
ಹಲ್ಲಿಲ್ಲದ
ಹಾವಿನ
ಹಾಗೆ
ಮಾಡಲು
ಮುಂದಾಗಿರುವುದನ್ನು
ನಾವು
ಖಂಡಿಸುತ್ತೇವೆ
ಎಂದು
ಹೇಳಿದರು.
ಆಮ್
ಆದ್ಮಿ
ಪಾರ್ಟಿ
ಪ್ರತಿಭಟನೆ
ಮತ್ತು
ಪೊಲೀಸರೊಂದಿಗಿನ
ಚಕಮಕಿಯ
ಫೋಟೋಗಳು
ಇಲ್ಲಿವೆ.