ಸಂಶೋಧಿತ ತೊಗರಿ, ಶೇಂಗಾ ತಳಿಗಳ ವಿಶೇಷವೇನು?
ಬೆಂಗಳೂರು, ನ. 19 : ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾದ ಮೂರು ದಿನದ 'ಕೃಷಿಮೇಳ' ದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಎರಡು ಸಂಶೋಧಿತ ತಳಿಗಳನ್ನು ಬುಧವಾರ ಲೋಕಾರ್ಪಣೆ ಮಾಡಿದರು. ಬಿಆರ್ ಜಿ-5 (ತೊಗರಿ) ಮತ್ತು ಕೆಸಿಜಿ-6(ಕಡಲೆಕಾಯಿ) ತಳಿಗಳನ್ನು ರಾಜ್ಯಪಾಲರು ಬಿಡುಗಡೆ ಮಾಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಿರಂತರ ಸಂಶೋಧನೆಯಲ್ಲಿ ತೊಡಗಿದ್ದು ಪ್ರತಿ ವರ್ಷ ಆಯೋಜಿಸುವ ಕೃಷಿ ಮೇಳದಲ್ಲಿ ಇಂಥ ವಿನೂತನ ತಳಿಗಳನ್ನು ರೈತರಿಗೆ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡುತ್ತಿದೆ. ಮಣ್ಣಿನ ಗುಣಕ್ಕೆ ಅನುಗುಣವಾಗಿ ಹೊಸ ತಳಿಗಳನ್ನು ಶಿಫಾರಸು ಮಾಡಲಾಗುತ್ತಿದ್ದು ರೈತರ ಭಾಗವಹಿಸುವಿಕೆ ಮುಖ್ಯ ಎಂದು ಕೃಷಿ ವಿವಿ ಕುಲಪತಿ ಡಾ. ಡಿ.ಪಿ.ಕುಮಾರ್ ಮಾಹಿತಿ ನೀಡಿದರು.[ಬೆಂಗಳೂರಿನಲ್ಲಿ 3 ದಿನಗಳ ಕೃಷಿಮೇಳಕ್ಕೆ ಚಾಲನೆ]
ಆರ್
ಜಿ-5
(ತೊಗರಿ)
ವಿಶೇಷವೇನು?
*
ಹೆಕ್ಟೇರ್
ಗೆ
25
ಕ್ಷಿಂಟಾಲ್
ಇಳುವರಿ
*
ಪ್ಯುಸೇರಿಯಂ
ಸೊರಗು
ರೋಗ
ನಿರೋಧಕ
*
ನೀರಾವರಿ
ಮತ್ತು
ಮಳೆಯಾಶ್ರಿತ
ಪ್ರದೇಶಕ್ಕೆ
ಉತ್ತಮ
*
ಅವಧಿ:
170-175
ದಿನಗಳು
ಕೆಸಿಜಿ-6(ಕಡಲೆಕಾಯಿ)
ಇಳುವರಿ
ಎಷ್ಟು?
*
ಹೆಕ್ಟೇರ್
ಗೆ
2026
ಕೆಜಿ
(ಹಸಿ)
735
ಕೆಜಿ
ಎಣ್ಣೆ
*
ಎಲೆಚುಕ್ಕಿ
ಮತ್ತು
ತುಕ್ಕು
ರೋಗ
ನಿರೋಧಕ
*
ನೀರಾವರಿ
ಮತ್ತು
ಮಳೆಯಾಶ್ರಿತ
ಪ್ರದೇಶಕ್ಕೆ
ಉತ್ತಮ
*
ಅವಧಿ:
105-110
ದಿನಗಳು