ಸದನದಲ್ಲಿ ಇಂದು : 'ಸರ್ಕಾರ ಭ್ರಷ್ಟಾಚಾರಿಗಳ ಪರವಾಗಿದೆ'
ಬೆಂಗಳೂರು, ನವೆಂಬರ್ 26 : 'ಕರ್ನಾಟಕ ಸರ್ಕಾರ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದೆ. ಸರ್ಕಾರ ಭ್ರಷ್ಟಾಚಾರಿಗಳ ಪರವಾಗಿದೆ' ಎಂಬ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಮಾತು ಸದನದಲ್ಲಿ ಗುರುವಾರ ಕೋಲಾಹಲಕ್ಕೆ ಕಾರಣವಾಯಿತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ವಾಕ್ಸಮರದ ಕಾರಣ ಸದನವನ್ನು 10 ನಿಮಿಷ ಮುಂದೂಡಲಾಯಿತು.
ಚಳಿಗಾಲದ
ಅಧಿವೇಶನದ
9ನೇ
ದಿನದ
ಕಲಾಪ
ಆರಂಭವಾಗುತ್ತಿದ್ದಂತೆ
ಜಗದೀಶ್
ಶೆಟ್ಟರ್
ಅವರು,
ಕ್ರಿಕೆಟ್
ಬೆಟ್ಟಿಂಗ್
ದಂಧೆ,
ಅಕ್ರಮ
ಆಸ್ತಿ
ಗಳಿಕೆ
ಆರೋಪ
ಎದುರಿಸುತ್ತಿರುವ
ಹಿರಿಯ
ಐಎಎಸ್
ಅಧಿಕಾರಿ
ಕಪಿಲ್
ಮೋಹನ್
ಅವರ
ವಿಷಯವನ್ನು
ಪ್ರಸ್ತಾಪಿಸಿದರು.
[ಸದನದಲ್ಲಿ
ಟಿಪ್ಪು
ಬಗ್ಗೆ
ವಾಕ್ಸಮರ
:
ಯಾರು,
ಏನು
ಹೇಳಿದರು?]
'ಕಪಿಲ್ ಮೋಹನ್ ಅವರ ಮನೆಯ ಮೇಲೆ ದಾಳಿ ನಡೆದಾಗ ಅಕ್ರಮ ಹಣ ಪತ್ತೆಯಾಗಿದೆ. ಬ್ಲೂ ಫಿಲಂಗಳ ಸಿ.ಡಿ ಗಳುಪತ್ತೆಯಾಗಿವೆ. ಆದರೂ ಅವರು ಸೇವೆಯಲ್ಲಿ ಮುಂದುವರೆಯುತ್ತಿದ್ದಾರೆ. ಸರ್ಕಾರ ಭ್ರಷ್ಟ ಅಧಿಕಾರಿಗಳ ಪರವಾಗಿದೆ' ಎಂದು ಹೇಳಿದರು. [ಕಪಿಲ್ ಮೋಹನ್ ಗೆ ಬಂಧನ ಭೀತಿ]
ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ಆರಂಭವಾಯಿತು. ತಕ್ಷಣ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿ ಪ್ರತಿಪಕ್ಷ ನಾಯಕರ ಸಭೆ ಕರೆದರು.