ರೊಚ್ಚಿಗೆದ್ದು ಬಜೆಟ್ ಪುಸ್ತಕ ಎಸೆದ ಸಿದ್ದರಾಮಯ್ಯ!
ಬೆಂಗಳೂರು, ಜುಲೈ 24 : ಮುಂಗಾರು ಅಧಿವೇಶನದ ಶುಕ್ರವಾರದ ಕಲಾಪದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಜೆಟ್ ಪುಸ್ತಕವನ್ನು ಎಸೆದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. 'ಬಿಜೆಪಿ ಎಂದರೆ ಸುಳ್ಳು, ಸುಳ್ಳು ಎಂದರೆ ಬಿಜೆಪಿ' ಎಂದು ತಿರುಗೇಟು ಕೊಟ್ಟರು.
ಶುಕ್ರವಾರದ
ಕಲಾಪದ
ವೇಳೆ
ವಿಧಾನಸಭೆಯಲ್ಲಿ
ಸಿದ್ದರಾಮಯ್ಯ
ಅವರು
ಬಜೆಟ್
ಅಂಕಿ-ಅಂಶಗಳ
ವಿವರ
ನೀಡುತ್ತಿದ್ದರು.
ಆ
ಸಂದರ್ಭದಲ್ಲಿ
ಕೇಂದ್ರದಿಂದ
ಬರುವ
ಅನುದಾನದಲ್ಲಿ
4,690
ಕೋಟಿ
ರೂ.
ಕೊರತೆ
ಉಂಟಾಗಿದೆ
ಎಂದರು.
ಇದರಿಂದ
ಕೆರಳಿದ
ಬಿಜೆಪಿ
ಸದಸ್ಯರು
ತಪ್ಪು
ಮಾಹಿತಿ
ನೀಡುತ್ತಿದ್ದೀರಿ
ಎಂದು
ಗದ್ದಲ
ಮಾಡಿದರು.
ಮುಖ್ಯಮಂತ್ರಿಗಳು ಉತ್ತರ ನೀಡುವ ಸಂದರ್ಭದಲ್ಲಿ ತಡೆಯೊಡ್ಡಬಾರದು ಎಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಸೂಚನೆಯನ್ನು ಪಾಲಿಸದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಇತರ ಸದಸ್ಯರು ತಪ್ಪು ಮಾಹಿತಿ ಕೊಡಬೇಡಿ ಎಂದು ಗದ್ದಲವೆಬ್ಬಿಸಿದರು. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಪಗೊಂಡರು. [ 'ಅಂಬರೀಶ್ ಹೀರೋ ಆಗಿದ್ದಕ್ಕೆ ಸಚಿವರನ್ನಾಗಿ ಮಾಡಿದ್ದು']
'ಕೇಂದ್ರದಿಂದ 4,690 ಕೋಟಿ ಕೊರತೆಯಾಗಿದೆ. ಸತ್ಯವನ್ನು ಒಪ್ಪಿಕೊಳ್ಳಿ, ಸತ್ಯ ಯಾವಾಗಲೂ ಕಠೋರವಾಗಿರುತ್ತದೆ' ಎಂದರು. ಆಗ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರು 'ಕೇಂದ್ರ ಕೊಟ್ಟಿರುವ ಅನುದಾನದ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದೀರಿ' ಎಂದರು, ಆಗ ಸಿದ್ದರಾಮಯ್ಯ ಅವರು ರೊಚ್ಚಿಗೆದ್ದರು.
'ಬಿಜೆಪಿ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಬಿಜೆಪಿ. ಬಿಜೆಪಿಯವರು ಸುಳ್ಳಿನ ಸರದಾರರು' ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಕೈಯಲ್ಲಿ ಹಿಡಿದುಕೊಂಡಿದ್ ಬಜೆಟ್ ಪುಸ್ತಕವನ್ನು ಟೇಬಲ್ ಮೇಲೆ ಎಸೆದರು. ಮಧ್ಯಪ್ರವೇಶಿಸಿದ ಕಾಗೋಡು ತಿಮ್ಮಪ್ಪ ಅವರು ಕೋಲಾಹಲ ನಡೆಸದಂತೆ ಸದಸ್ಯರಿಗೆ ಎಚ್ಚರಿಕೆ ನೀಡಿದರು.
ಈ ಗದ್ದಲದ ನಡುವೆಯೇ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಲೋಕಾಯುಕ್ತ ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಿದರು. ಆದರೆ, ಗದ್ದಲ ಹೆಚ್ಚಾಗಿದ್ದರಿಂದ ಸ್ಪೀಕರ್ ಕಲಾಪವನ್ನು 3 ಗಂಟೆಗೆ ಮುಂದೂಡಿದರು.