ವಿಧಾನ ಪರಿಷತ್ತಿನಲ್ಲಿ ಹಾಸಿಗೆ, ದಿಂಬು ಖರೀದಿ ಬಗ್ಗೆ ಚರ್ಚೆ
ಬೆಳಗಾವಿ, ಜುಲೈ 07 : ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ಗಳಿಗೆ ಖರೀದಿ ಮಾಡಿರುವ ದಿಂಬು, ಹಾಸಿಗೆ ಬಗ್ಗೆ ವಿಧಾನಷರಿಷತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. 19 ಕೋಟಿಯ ಅವ್ಯವಹಾರದ ತನಿಖೆಯನ್ನು ಸದನ ಸಮಿತಿಗೆ ಒಪ್ಪಿಸಬೇಕೆಂದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಮುಂಗಾರು
ಅಧಿವೇಶನದ
7ನೇ
ದಿನದ
ಕಲಾಪ
ಆರಂಭವಾಗುತ್ತಿದ್ದಂತೆ
ವಿಧಾನಪರಿಷತ್ತಿನಲ್ಲಿ
ಸಭಾಪತಿ
ಡಿ.ಎಚ್.ಶಂಕರಮೂರ್ತಿ
ಅವರು,
ಪ್ರಶ್ನೋತ್ತರ
ಕಲಾಪ
ನಡೆಸಲು
ಮುಂದಾದರು.
ಈ
ಸಮಯದಲ್ಲಿ
ಹಾಸಿಗೆ,
ದಿಂಬು
ಹಗರಣದ
ಬಗ್ಗೆ
ಪ್ರತಿಪಕ್ಷ
ನಾಯಕ
ಕೆ.ಎಸ್.ಈಶ್ವರಪ್ಪ
ವಿಷಯ
ಪ್ರಸ್ತಾಪಿಸಿದರು.
[ಸೋಮವಾರದ
ಕಲಾಪದ
ಮುಖ್ಯಾಂಶಗಳು]
19 ಕೋಟಿ ಹಗರಣದ ತನಿಖೆಯನ್ನು ಸದನ ಸಮಿತಿಗೆ ಒಪ್ಪಿಸಬೇಕು. ಸಿಐಡಿ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ ಎಂದು ಈಶ್ವರಪ್ಪ ಅವರು ಒತ್ತಾಯಿಸಿದರು. ಜೆಡಿಎಸ್ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.
ಯಾರನ್ನೂ ರಕ್ಷಿಸುವುದಿಲ್ಲ : ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಿದ ಸಭಾನಾಯಕ ಎಸ್.ಆರ್.ಪಾಟೀಲ್ ಅವರು, ಹಗರಣದಲ್ಲಿ ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ನಮ್ಮ ಗುರಿ, ಈ ಹಗರಣದಲ್ಲಿ ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಲಿದ್ದಾರೆ. ನಂತರ ತಪ್ಪಿತಸ್ಥರನ್ನು ಜೈಲಿಗೆ ಕಳಿಸಲಾಗುತ್ತದೆ ಎಂದರು.
ಖಾಲಿ ಗೋದಾಮುಗಳಿಗೆ ಬೀಗ ಹಾಕಲಾಗಿದೆ : ಕಬ್ಬುಬೆಳೆಗಾರರ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿನ ಸಕ್ಕರೆ ಇಲ್ಲದ ಖಾಲಿ ಗೋದಾಮುಗಳಿಗೆ ಬೀಗಹಾಕಲಾಗಿದೆ ಎಂದು ಬಿಜೆಪಿ ಸದಸ್ಯ ಲಕ್ಷ್ಮಣ್ ಸವದಿ ಅವರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಈ ವಿಷಯದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬೆಳಗಾವಿ ಜಿಲ್ಲೆಯ ಘಟಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಗೋದಾಮಿನಲ್ಲಿ ಸಕ್ಕರೆ ಇಲ್ಲ. ಆದರೂ ಗೋದಾಮಿಗೆ ಬೀಗ ಹಾಕಲಾಗಿದೆ ಎಂದು ಸವದಿ ಹೇಳಿದರು.
ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಹಕಾರ ಸಚಿವ ಮಹದೇವ ಪ್ರಸಾದ್ ಅವರಿಗೆ ಸೂಚನೆ ನೀಡಿದರು. ಸಕ್ಕರೆ ಇಲ್ಲದ ಯಾವ ಗೋದಾಮಿಗೂ ಬೀಗ ಹಾಕಿಲ್ಲ. ಈ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಸದನಕ್ಕೆ ಉತ್ತರ ನೀಡಿದರು.