ಪ್ರಕೃತಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರ್ತಾರೆ ಕೇಜ್ರಿವಾಲ್
ಬೆಂಗಳೂರು, ಮಾ. 4 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹತ್ತು ದಿನಗಳ ರಜೆ ಪಡೆದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕೆಮ್ಮು ಮತ್ತು ಮಧುಮೇಹದಿಂದ ಬಳಲುತ್ತಿರುವ ಅವರು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ಅರವಿಂದ್
ಕೇಜ್ರಿವಾಲ್
ಅವರನ್ನು
ಕೆಮ್ಮಿನ
ಸಮಸ್ಯೆ
ದೀರ್ಘಕಾಲದಿಂದ
ಕಾಡುತ್ತಿದೆ.
ಇತ್ತೀಚೆಗೆ
ಪ್ರಧಾನಿ
ನರೇಂದ್ರ
ಮೋದಿ
ಅವರು
ಈ
ಸಮಸ್ಯೆಗೆ
ಸೂಕ್ತ
ಚಿಕಿತ್ಸೆ
ಪಡೆಯುವಂತೆ
ಸಲಹೆ
ನೀಡಿದ್ದರು.
ಸದ್ಯ,
ಕೇಜ್ರಿವಾಲ್
ಕೆಮ್ಮಿಗೆ
ಚಿಕಿತ್ಸೆ
ಪಡೆಯಲು
ನಿರ್ಧರಿಸಿದ್ದು,
ಮಧುಮೇಹವನ್ನು
ನಿಯಂತ್ರಣಕ್ಕೆ
ತರಲು
ಮುಂದಾಗಿದ್ದಾರೆ.
[ಕೇಜ್ರಿವಾಲ್
ಡಾಕ್ಟರ್
ಅಪಾಯಿಂಟ್ಮೆಂಟ್
ಕೇಳಿಲ್ಲವಂತೆ]
ದೆಹಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಕೇಜ್ರಿವಾಲ್ ಅವರಿಗೆ ಕೆಮ್ಮಿನ ಸಮಸ್ಯೆ ಇತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಇದು ಮತ್ತಷ್ಟು ಹೆಚ್ಚಾಗಿತ್ತು. ಜೊತೆಗೆ ಮಧುಮೇಹವನ್ನು ನಿಯಂತ್ರಣಕ್ಕೆ ತರಲು ಕೇಜ್ರಿವಾಲ್ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ.[ಚಿತ್ರಗಳಲ್ಲಿ : ಸಿಎಂ ಆದ ಅರವಿಂದ್ ಕೇಜ್ರಿವಾಲ್]
ತುಮಕೂರು
ರಸ್ತೆಯಲ್ಲಿರುವ
ಜಿಂದಾಲ್
ಪ್ರಕೃತಿ
ಚಿಕಿತ್ಸಾ
ಕೇಂದ್ರದಲ್ಲಿ
ಕೇಜ್ರಿವಾಲ್
ಅವರು
ಹತ್ತು
ದಿನಗಳ
ಕಾಲ
ಚಿಕಿತ್ಸೆ
ಪಡೆಯಲಿದ್ದು,
ಗುರುವಾರ
ಅವರು
ನಗರಕ್ಕೆ
ಆಗಮಿಸುವ
ಸಾಧ್ಯತೆ
ಇದೆ.
ದೆಹಲಿ
ಉಪ
ಮುಖ್ಯಮಂತ್ರಿ
ಮನೀಶ್
ಸಿಸೋಡಿಯಾ
ಹತ್ತು
ದಿನಗಳ
ಕಾಲ
ದೆಹಲಿಯ
ಆಡಳಿತವನ್ನು
ನೋಡಿಕೊಳ್ಳಲಿದ್ದಾರೆ.
[ಜಿಂದಾಲ್
ಕೇಂದ್ರ
ವೆಬ್
ಸೈಟ್]
ಮೋದಿ ಸಲಹೆ ನೀಡಿದ್ದರು : ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿರುವ ಡಾ.ನಾಗೇಂದ್ರ ಅವರ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯಲ್ಲಿ ಕೆಮ್ಮಿಗೆ ಚಿಕಿತ್ಸೆ ಪಡೆಯುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಿದ್ದರು. ಆದರೆ, ಕೇಜ್ರಿವಾಲ್ ಜಿಂದಾಲ್ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.