ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಅರುಣ್ ಕುಮಾರ್
ಬೆಂಗಳೂರು, ಮೇ 09 : ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಪಿ.ಅರುಣ್ ಕುಮಾರ್ ಅವರನ್ನು ನೇಮಿಸಲಾಗಿದ್ದು, ಈ ಹುದ್ದೆಯಲ್ಲಿದ್ದ ಸಂತೋಷ್ ಅವರು ದೆಹಲಿಗೆ ತೆರಳಲಿದ್ದು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ.
2006ರಲ್ಲಿ
ಶಿವಮೊಗ್ಗದಲ್ಲಿ
ಸಂಘದ
ಪ್ರಚಾರಕರಾಗಿ
ಕಾರ್ಯನಿರ್ವಹಿಸುತ್ತಿದ್ದ
ಸಂತೋಷ್
ಅವರನ್ನು
ರಾಜ್ಯ
ಸಂಘಟನಾ
ಕಾರ್ಯದರ್ಶಿಯಾಗಿ
ನೇಮಕ
ಮಾಡಿದ್ದು
ಯಡಿಯೂರಪ್ಪ.
ಆದರೆ,
ಯಡಿಯೂರಪ್ಪ
ಅವರು
ಮುಖ್ಯಮಂತ್ರಿಯಾದ
ಬಳಿಕ
ಸಂತೋಷ್
ಮತ್ತು
ಅವರ
ನಡುವಿನ
ಸಂಬಂಧ
ಹಳಸಿತ್ತು.
[ಯಡಿಯೂರಪ್ಪ
:
ಶಿಕಾರಿಪುರ
ಜನಸಂಘದಿಂದ
ಬಿಜೆಪಿ
ಗದ್ದುಗೆ
ತನಕ]
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ, ಪಕ್ಷ ತೊರೆದು, ಪುನಃ ಪಕ್ಷಕ್ಕೆ ಬಂದು, ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಸಂತೋಷ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮುಂದುವರೆದಿದ್ದರು. ಈಗ ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಬಳಿಕ ಅವರನ್ನು ಬದಲಾವಣೆ ಮಾಡಲಾಗುತ್ತಿದೆ. [ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು]
ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿರುವವರು ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ, ಯಡಿಯೂರಪ್ಪ ಅವರು ತಮ್ಮ ನಂಬಿಕಸ್ತರಾದ ಅರುಣ್ ಕುಮಾರ್ ಅವರನ್ನು ಆ ಜಾಗಕ್ಕೆ ತಂದು ಕೂರಿಸಿದ್ದಾರೆ. [ಯಡಿಯೂರಪ್ಪಗೆ ಹೈಕಮಾಂಡ್ ನಾಯಕರು ಕೊಟ್ಟ ಸಂದೇಶ ಏನು?]
20ಕ್ಕೆ ಪಟ್ಟಿ ಬಿಡುಗಡೆ : ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪದಾಧಿಕಾರಿಗಳನ್ನು ಬದಲಾವಣೆ ಮಾಡಿದ್ದು, ಮೇ 20ರಂದು ಹೊಸ ಪಟ್ಟಿ ಬಿಡುಗಡೆಯಾಗಲಿದೆ. ರಾಜ್ಯ ಕೋರ್ ಕಮಿಟಿಯಲ್ಲಿರುವ ಕೆಲವು ನಾಯಕರ ಬದಲಾವಣೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಯಾರು ಅರುಣ್ ಕುಮಾರ್? : ಅರುಣ್ ಕುಮಾರ್ ಅವರು ಆರ್ಎಸ್ಎಸ್ ಧಾರವಾಡ ವಿಭಾಗದ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲಿಯೇ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮೂಲತಃ ರಾಯಚೂರಿನವರಾದ ಅರುಣ್ ಕುಮಾರ್, ಇಂಜಿನಿಯರಿಂಗ್ ಪದವೀಧರರು.