ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ : ಪೇಜಾವರ ಶ್ರೀ
ಹಾಸನ, ಅ.30 : 'ಹುಲಿ ರಾಷ್ಟ್ರೀಯ ಪ್ರಾಣಿಯಾಗಿರುವುದರಿಂದ ದೇಶದಲ್ಲಿ ಅಶಾಂತಿ ಹೆಚ್ಚುತ್ತಿದೆ. ಆದ್ದರಿಂದ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂದು' ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.
ಚನ್ನರಾಯಪಟ್ಟಣದಲ್ಲಿ
ಗುರುವಾರ
ಮಾತನಾಡಿದ
ಪೇಜಾವರ
ಮಠದ
ಶ್ರೀ
ವಿಶ್ವೇಶ
ತೀರ್ಥಶ್ರೀಪಾದರು,
ಗೋವು
ರಾಷ್ಟ್ರೀಯ
ಪಾಣಿಯಾಗಬೇಕೆಂದು
ಹೇಳಿದರು.
ಈ
ಕುರಿತು
ಪ್ರಧಾನಿ
ನರೇಂದ್ರ
ಮೋದಿ
ಅವರೊಂದಿಗೆ
ಮಾತುಕತೆ
ನಡೆಸಿ
ಕೇಂದ್ರ
ಸರ್ಕಾರಕ್ಕೆ
ಮನವಿ
ಮಾಡುತ್ತೇನೆ
ಎಂದರು.
[ಕುರಿಯನ್ನು
ರಾಷ್ಟ್ರೀಯ
ಪ್ರಾಣಿಯಾಗಿ
ಘೋಷಿಸಿ]
ಪ್ರಸ್ತುತ ಹುಲಿ ರಾಷ್ಟ್ರೀಯ ಪ್ರಾಣಿಯಾಗಿದೆ. ಆದ್ದರಿಂದ ದೇಶದಲ್ಲಿ ಅಶಾಂತಿ, ಕೋಮುಗಲಭೆ, ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಶ್ರೀಗಳು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿದರು. [ಹುಲಿ ದತ್ತುಪಡೆದ ಬಿಎಸ್ ಯಡಿಯೂರಪ್ಪ]
ಕುರಿಯನ್ನು ರಾಷ್ಟ್ರೀಯ ಪ್ರಾಣಿಯಾಗಿಸಿ : 2013ರಲ್ಲಿ ಕುರಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಕನಕಗುರು ಪೀಠದ ಸ್ವಾಮೀಜಿ ನಿರಂಜನಾನಂದ ಪುರಿಶ್ರೀಗಳು ಆಗ್ರಹಿಸಿದ್ದಾರೆ. ಕುರಿ ಸರ್ವಶ್ರೇಷ್ಠವಾದ ಪ್ರಾಣಿ, ಗೋವಿಗಿಂತಲೂ ಶ್ರೇಷ್ಠವಾಗಿದೆ. ಆದ್ದರಿಂದ ಅದನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂದು ಸ್ವಾಮೀಜಿ ಹೇಳಿದ್ದರು.