ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಬಸ್ ಸೇವೆ
ಮಂಡ್ಯ, ಮಾ. 30 : ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಸೋಮವಾರ ರಾತ್ರಿ ನಡೆಯಲಿದೆ. ಉತ್ಸವಕ್ಕಾಗಿ ಮಂಡ್ಯ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸೋಮವಾರ
ರಾತ್ರಿ
8
ಗಂಟೆಗೆ
ವೈರಮುಡಿ
ಉತ್ಸವ
ಆರಂಭವಾಗಲಿದ್ದು,
ಮಂಗಳವಾರ
ಮುಂಜಾನೆ
3.30ರ
ತನಕ
ನಡೆಯಲಿದೆ.
ಮಂಡ್ಯ,
ಮೈಸೂರು,
ನಾಗಮಂಗಲ
ಸೇರಿದಂತೆ
ರಾಜ್ಯದ
ವಿವಿಧ
ಪ್ರದೇಶಗಳಿಂದ
ಸಾವಿರಾರು
ಭಕ್ತರು
ಮೇಲುಕೋಟೆಗೆ
ಆಗಮಿಸಲಿದ್ದಾರೆ.
[ಮೇಲುಕೋಟೆ
ದೇವಾಲಯದಿಂದ
ಆಭರಣ
ನಾಪತ್ತೆ]
ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು 1,500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮಂಡ್ಯ, ಮೈಸೂರು, ನಾಗಮಂಗಲದಿಂದ ಬರುವ ಪ್ರಯಾಣಿಕರಿಗಾಗಿ ವಿಶೇಷ ಬಸ್ ಸೇವೆ ಒದಗಿಸಲಾಗಿದೆ. [ದೇವಾಲಯದಲ್ಲಿ ನಡೆದ ಅಪಶಕುನಕ್ಕೆ ಬೆಚ್ಚಿಬಿದ್ದ ಜನತೆ]
ಬೆಂಗಳೂರಿನಿಂದ ಬಸ್ ಸೌಲಭ್ಯ : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೈರಮುಡಿ ಉತ್ಸವಕ್ಕಾಗಿ ಒಂದು ದಿನದ ಪ್ರವಾಸವನ್ನು ಮಾರ್ಚ್ 30 ರಂದು ಏರ್ಪಡಿಸಿದೆ. ಬೆಂಗಳೂರಿನ ಬಾದಾಮಿ ಹೌಸ್ನಿಂದ ಮಧ್ಯಾಹ್ನ 3 ಗಂಟೆಗೆ ಈ ಬಸ್ ಹೊರಡಲಿದ್ದು, ಮಂಗಳವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದೆ. ಪ್ರಯಾಣದರ 550 ರೂ. ಹೆಚ್ಚಿನ ಮಾಹಿತಿಗಾಗಿ 43344334, 22275869, 8970650070 ದೂರವಾಣಿ ಸಂಖ್ಯೆ ಕರೆ ಮಾಡಬಹುದಾಗಿದೆ.