ಜಾಧವ್ ವಿರುದ್ಧದ ಭೂ ಹಗರಣ, ಎಸಿಬಿ ತನಿಖೆ ಆರಂಭ
ಬೆಂಗಳೂರು, ಆಗಸ್ಟ್ 25 : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಅವರ ವಿರುದ್ಧದ ಭೂ ಹಗರಣದ ಆರೋಪದ ತನಿಖೆಯನ್ನು ಎಸಿಬಿ ಆರಂಭಿಸಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಮೇಲೆ ದಾಳಿ ಮಾಡಿ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಆರ್ಟಿಐ
ಕಾರ್ಯಕರ್ತ
ಎಸ್.ಭಾಸ್ಕರನ್
ಅವರು
ಭ್ರಷ್ಟಾಚಾರ
ನಿಗ್ರಹ
ದಳ
(ಎಸಿಬಿ)ಗೆ
ಅರವಿಂದ
ಜಾಧವ್
ಮತ್ತು
ಇತರ
ಮೂವರ
ವಿರುದ್ಧ
ಮಂಗಳವಾರ
ದೂರು
ಕೊಟ್ಟಿದ್ದರು.
ಬುಧವಾರ
ಜಿಲ್ಲಾಧಿಕಾರಿಗಳ
ಕಚೇರಿಯಿಂದ
ದಾಖಲೆಗಳನ್ನು
ಎಸಿಬಿ
ಪಡೆದುಕೊಂಡು
ತನಿಖೆ
ಆರಂಭಿಸಿದೆ.[ಜಾಧವ್
ವಿರುದ್ಧ
ಎಸಿಬಿಗೆ
ದೂರು]
ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಕಚೇರಿಗೂ ಭೇಟಿ ನೀಡಿರುವ ಎಸಿಬಿ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಕೆಲವು ಕಿರಿಯ ಅಧಿಕಾರಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.[ಜಾಧವ್ ವಿವಾದ: ವರದಿ ಕೇಳಿದ ಸಿದ್ದರಾಮಯ್ಯ]
ಲೋಕಾಯುಕ್ತಕ್ಕೆ ದೂರು : ಅರವಿಂದ ಜಾಧವ್ ಅವರ ವಿರುದ್ಧ ಲೋಕಾಯುಕ್ತಕ್ಕೂ ದೂರು ಸಲ್ಲಿಕೆಯಾಗಿದೆ. ಬುಧವಾರ ಆರ್.ರಮೇಶ್ ಎಂಬುವರು ಜಾಧವ್, ಬೆಂಗಳೂರು ಜಿಲ್ಲಾಧಿಕಾರಿ ವಿ.ಶಂಕರ್, ಆನೇಕಲ್ ತಹಶೀಲ್ದಾರ್ ವಿರುದ್ಧ ತನಿಖೆ ನಡೆಸುವಂತೆ ದೂರು ಸಲ್ಲಿಸಿದ್ದಾರೆ.[ಅರವಿಂದ್ ಜಾಧವ್ ವಿರುದ್ಧ ಭೂ ಹಗರಣ ಆರೋಪ?]
ಇಂದು ವರದಿ ಸಲ್ಲಿಕೆ : ಮುಖ್ಯ ಕಾರ್ಯದರ್ಶಿ ಅವರ ವಿರುದ್ಧದ ಭೂ ಹಗರಣ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದರು. ಬೆಂಗಳೂರು ಜಿಲ್ಲಾಧಿಕಾರಿ ವಿ. ಶಂಕರ್ ಅವರು ವರದಿ ಸಿದ್ಧಪಡಿಸಿದ್ದಾರೆ. ಇಂದು ಅವರು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.