ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ
ಬೆಂಗಳೂರು, ಏ. 25 : ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ತುಟ್ಟಿಭತ್ಯೆಯನ್ನು ಶೇ.3.5ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ 8.5 ಲಕ್ಷ ನೌಕರರ ಮಾಸಿಕ ವೇತನ ಹೆಚ್ಚಳವಾಗಲಿದೆ.
ಕೆಲವು
ದಿನಗಳ
ಹಿಂದೆ
ಕೇಂದ್ರ
ಸರ್ಕಾರ
ನೌಕರರ
ತುಟ್ಟಿಭತ್ಯೆಯನ್ನು
ಶೇ.6ರಷ್ಟು
ಏರಿಕೆ
ಮಾಡಿತ್ತು.
ರಾಜ್ಯ
ಸರ್ಕಾರ
ತನ್ನ
ನೌಕರರ
ತುಟ್ಟಿಭತ್ಯೆಯನ್ನು
ಏರಿಕೆ
ಮಾಡಿ
ಶುಕ್ರವಾರ
ಆದೇಶ
ಹೊರಡಿಸಿದೆ.
2015ರ
ಜನವರಿ
1ರಿಂದಲೇ
ಪೂರ್ವಾನ್ವಯ
ಆಗುವಂತೆ
ಭತ್ಯೆಯನ್ನು
ಮಂಜೂರು
ಮಾಡಲಾಗಿದೆ.
[ಸರ್ಕಾರಿ
ನೌಕರರೇ..
ಅಕಾಲಿಕವಾಗಿ
ಸಿಹಿ
ಸುದ್ದಿ
ನಿರೀಕ್ಷಿಸಿ]
ಸರ್ಕಾರದ ಆದೇಶದ ಪ್ರಕಾರ ಮೂಲ ವೇತನದ ಶೇ.25.25 ರಿಂದ ಶೇ.28.75ಕ್ಕೆ ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ. ತುಟ್ಟಿಭತ್ಯೆ ಬಾಕಿಯನ್ನು ನಗದು ರೂಪದಲ್ಲಿ ಪಾವತಿಸುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ನಿವೃತ್ತ ನೌಕರರು, ಕುಟುಂಬ ಪಿಂಚಣಿದಾರರು ಸೇರಿದಂತೆ ಒಟ್ಟು 8.5 ಲಕ್ಷ ಮಂದಿಯ ಮಾಸಿಕ ವೇತನ ಏರಿಕೆಯಾಗಲಿದೆ. [ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು]
ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ತುಟ್ಟಿಭತ್ಯೆ ಹೆಚ್ಚಳ ಮಾಡಬೇಕೆಂದು ಸರ್ಕಾರಿ ನೌಕರರ ಸಂಘ ಮನವಿ ಮಾಡಿತ್ತು. ಸರ್ಕಾರದ ನಿರ್ಧಾರವನ್ನು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಹಾಗೂ ನೌಕರರ ಒಕ್ಕೂಟದ ಅಧ್ಯಕ್ಷ ಯು.ಡಿ.ನರಸಿಂಹಯ್ಯ ಸ್ವಾಗತಿಸಿದ್ದಾರೆ.
ತುಟ್ಟಿ ಭತ್ಯೆ(dearness allowance) : ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.