ದ್ವಿತೀಯ ಪಿಯುಸಿ ಗೊಂದಲ, ಲೋಕಾಯುಕ್ತಕ್ಕೆ ದೂರು
ಬೆಂಗಳೂರು, ಮೇ 23 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ಅಂಕ ಮತ್ತು ಫಲಿತಾಂಶದ ಗೊಂದಲ ಲೋಕಾಯುಕ್ತ ಕಚೇರಿ ತಲುಪಿದೆ. ಪದವಿ ಪೂರ್ಣ ಶಿಕ್ಷಣ ಇಲಾಖೆ ನಿರ್ದೇಶಕಿ ಸುಷಮಾ ಗೋಡಬೋಲೆ ವಿರುದ್ಧ ಕರ್ತವ್ಯ ಚ್ಯುತಿ ದೂರು ದಾಖಲಾಗಿದೆ.
ಶುಕ್ರವಾರ
ಪೋಷಕರ
ಸಂಘದ
ಪದಾಧಿಕಾರಿಗಳು
ಲೋಕಾಯುಕ್ತ
ನ್ಯಾಯಮೂರ್ತಿ
ವೈ.ಭಾಸ್ಕರ್
ರಾವ್
ಅವರನ್ನು
ಭೇಟಿ
ಮಾಡಿ
ಸುಷಮಾ
ಗೋಡಬೋಲೆ
ಮತ್ತು
ಇತರ
ಅಧಿಕಾರಿಗಳ
ವಿರುದ್ಧ
ದೂರು
ನೀಡಿದ್ದಾರೆ.
ದೂರಿನ
ಬಗ್ಗೆ
ಪರಿಶೀಲನೆ
ನಡೆಸಲಾಗುತ್ತದೆ
ಎಂದು
ಲೋಕಾಯುಕ್ತರು
ಪದಾಧಿಕಾರಿಗಳಿಗೆ
ಭರವಸೆ
ನೀಡಿದ್ದಾರೆ.
[ಕಿಮ್ಮನೆ
ರತ್ನಾಕರ್
ಪತ್ರಿಕಾಗೋಷ್ಠಿ
ಮುಖ್ಯಾಂಶಗಳು]
ದೂರಿನಲ್ಲಿ ಏನಿದೆ : ಫಲಿತಾಂಶ ಪ್ರಕಟಿಸಲು ಪಿಯುಸಿ ವೆಬ್ಸೈಟ್ ಜೊತೆಗೆ 10 ಕ್ಕೂ ಹೆಚ್ಚು ಖಾಸಗಿ ವೆಬ್ ಸೈಟ್ಗಳಿಗೆ ಅವಕಾಶ ನೀಡಲಾಗಿತ್ತು. ಆದರೆ, ಖಾಸಗಿ ವೆಬ್ ಸೈಟ್ಗಳಲ್ಲಿ ಪ್ರಕಟಗೊಂಡ ಫಲಿತಾಂಶಕ್ಕೂ ಇಲಾಖೆಯ ವೆಬ್ ಸೈಟ್ನಲ್ಲಿರುವ ಫಲಿತಾಂಶಕ್ಕೂ ವ್ಯತ್ಯಾಸವಿದೆ. [ಪಿಯುಸಿ ಮೌಲ್ಯಮಾಪನದಲ್ಲಿ ನಿಜಕ್ಕೂ ಲೋಪವಾಗಿದೆಯೇ?]
ಫಲಿತಾಂಶದಗೊಂದಲದಿಂದಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ತಕ್ಕ ಶಿಕ್ಷೆಯಾಗಬೇಕು ಎಂದು ಮನವಿ ಮಾಡಲಾಗಿದೆ.
ಶುಕ್ರವಾರ ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಗೊಂದಲಗಳನ್ನು ಬಗೆಹರಿಸಿದ್ದರು. ಸುಷಮಾ ಗೋಡಬೋಲೆ ಗೊಂದಲ ಬಗೆಹರಿಸಲು ವಿಫಲವಾಗಿದ್ದಾರೆ ಎಂದು ಸಚಿವರು ಹೇಳಿದ್ದರು.