ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಗೊಂದಲವಿದ್ದರೆ ಕರೆ ಮಾಡಿ
ಬೆಂಗಳೂರು, ಮಾರ್ಚ್ 09 : ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರ ಕಚೇರಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಸಹಾಯವಾಣಿಯನ್ನು ಆರಂಭಿಸಿದೆ. ಮಾರ್ಚ್ 11ರಿಂದ 28ರ ತನಕ ಈ ಬಾರಿಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ.
ದ್ವಿತೀಯ
ಪಿಯುಸಿ
ಪರೀಕ್ಷೆಗೆ
ಸಂಬಂಧಿಸಿದಂತೆ
ವಿದ್ಯಾರ್ಥಿಗಳು
ಹಾಗೂ
ಪೋಷಕರಿಗೆ
ಉದ್ಭವಿಸುವ
ಸಂದೇಹ
ಮತ್ತು
ಸಂಶಯಗಳನ್ನು
ನಿವಾರಿಸಲು
ಸಹಾಯವಾಣಿ
ಕೇಂದ್ರವನ್ನು
ತೆರೆಯಲಾಗಿದ್ದು,
ಇದು
ಮಾರ್ಚ್
31ರ
ತನಕ
ಕಾರ್ಯನಿರ್ವಹಣೆ
ಮಾಡಲಿದೆ.
[ದ್ವಿತೀಯ
ಪಿಯುಸಿ
ಪರೀಕ್ಷೆ
ವೇಳಾಪಟ್ಟಿ]
ವಿದ್ಯಾರ್ಥಿಗಳು, ಪೋಷಕರು ಪರೀಕ್ಷೆ ಬಗ್ಗೆ ಗೊಂದಲಗಳಿದ್ದರೆ ಸಹಾಯವಾಣಿಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು. ದೂರವಾಣಿ ಸಂಖ್ಯೆಗಳು 080-26670630, 080-26670635. ಈ ಸಹಾಯವಾಣಿ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯ ತನಕ ಮಾತ್ರ ಕಾರ್ಯನಿರ್ವಹಿಸಲಿದೆ.
ಈ ಬಾರಿ 6,40,033 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 3.29 ಲಕ್ಷ ವಿದ್ಯಾರ್ಥಿಗಳು, 3.10 ಲಕ್ಷ ವಿದ್ಯಾರ್ಥಿನಿಯರಿದ್ದಾರೆ. ರಾಜ್ಯಾದ್ಯಂತ 1031 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಅಕ್ರಮಗಳನ್ನು ತಡೆಯಲು ಪರೀಕ್ಷಾ ಕೇಂದ್ರದ 200 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆಯ ವೇಳಾಪಟ್ಟಿಯನ್ನು ಕಾಲೇಜುಗಳಿಗೆ ಈಗಾಗಲೇ ಕಳುಹಿಸಿಕೊಟ್ಟಿದೆ. pue.kar.nic.in ವೆಬ್ ಸೈಟ್ನಲ್ಲಿಯೂ ವೇಳಾಪಟ್ಟಿ ಲಭ್ಯವಿದೆ.
ಅಂದಹಾಗೆ 2016ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ 30ರಿಂದ ಆರಂಭವಾಗಲಿವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹಾಯವಾಣಿಯನ್ನು ಆರಂಭಿಸಿದೆ. [SSLC ಪರೀಕ್ಷೆ ಸಹಾಯವಾಣಿ ಆರಂಭ]