ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ, ಇಬ್ಬರು ಸಿಐಡಿ ವಶಕ್ಕೆ
ಬೆಂಗಳೂರು, ಮಾರ್ಚ್ 31 : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ತಂಡ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದೆ. ಇಂದು ನಡೆಯಬೇಕಿದ್ದ ಮರು ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಯಾದ ಕಾರಣ ರದ್ದುಗೊಳಿಸಲಾಗಿದೆ.
ಸಿಐಡಿಯ
ಡಿಐಜಿ
ಸೋನಿಯಾ
ನಾರಂಗ್
ಅವರು
ಪಶ್ನೆ
ಪತ್ರಿಕೆ
ಸೋರಿಕೆ
ಕುರಿತು
ತನಿಖೆ
ನಡೆಸಲು
5
ತಂಡವನ್ನು
ರಚನೆ
ಮಾಡಿದ್ದಾರೆ.
ಬೆಂಗಳೂರು
ಸುತ್ತ-ಮುತ್ತ
ಕಾರ್ಯಾಚರಣೆ
ನಡೆಸಿದ
ಪೊಲೀಸರ
ತಂಡ,
ಇಬ್ಬರನ್ನು
ವಶಕ್ಕೆ
ಪಡೆದು
ವಿಚಾರಣೆ
ನಡೆಸುತ್ತಿದೆ.
[ಇಂದು
ನಡೆಯಬೇಕಿದ್ದ
ರಸಾಯನಶಾಸ್ತ್ರ
ಮರು
ಪರೀಕ್ಷೆ
ರದ್ದು]
ವಿದ್ಯಾರ್ಥಿಗಳ ಪ್ರತಿಭಟನೆ : ಇಂದು ನಡೆಯಬೇಕಾಗಿದ್ದ ರಸಾಯನಶಾಸ್ತ್ರ ಮರು ಪರೀಕ್ಷೆಯನ್ನು ರದ್ದುಗೊಳಿಸಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ಪಿಯು ಬೋರ್ಡ್ ಕಚೇರಿ ಬಳಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. [ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಿಐಡಿ ತನಿಖೆ]
ಸಚಿವರು
ಹೇಳುವುದೇನು?
:
ಪ್ರಶ್ನೆ
ಪತ್ರಿಕೆ
ಸೋರಿಕೆ
ಬಗ್ಗೆ
ಪ್ರತಿಕ್ರಿಯೆ
ನೀಡಿರುವ
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಸಚಿವ
ಕಿಮ್ಮನೆ
ರತ್ನಾಕರ
ಅವರು,
'ಪದವಿ
ಪೂರ್ವ
ಶಿಕ್ಷಣ
ಇಲಾಖೆ
ನಿರ್ದೇಶಕರೇ
ಇದಕ್ಕೆ
ನೇರಹೊಣೆ,
ನಾನು
ನೈತಿಕ
ಹೊಣೆ
ಹೊರಲು
ಸಿದ್ಧವಾಗಿದ್ದೇನೆ.
ಪತ್ರಿಕೆ
ಸೋರಿಕೆಯಾದ
ಬಗ್ಗೆ
ನಿರ್ದೇಶಕರಿಂದ
ವರದಿ
ಕೇಳಲಾಗಿದೆ'
ಎಂದು
ಹೇಳಿದರು.
[ಪ್ರಶ್ನೆಪತ್ರಿಕೆ
ಸೋರಿಕೆಯಾದರೆ
ಹೇಗೆ
ದೂರು
ನೀಡಬೇಕು?]