ದ್ವಿತೀಯ ಪಿಯು ರಸಾಯನಶಾಸ್ತ್ರ ಮರು ಪರೀಕ್ಷೆ ಮಾ.31ಕ್ಕೆ
ಬೆಂಗಳೂರು, ಮಾರ್ಚ್ 24 : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆ ದಿನಾಂಕ ಬದಲಾವಣೆಯಾಗಿದೆ. ಮಾರ್ಚ್ 21ರ ಸೋಮವಾರ ನಡೆದಿದ್ದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದುಗೊಳಿಸಲಾಗಿತ್ತು.
ಪದವಿ
ಪೂರ್ವ
ಶಿಕ್ಷಣ
ಇಲಾಖೆ
ಮಾರ್ಚ್
29ರ
ಮಂಗಳವಾರ
ರಸಾಯನಶಾಸ್ತ್ರ
ಮರು
ಪರೀಕ್ಷೆ
ನಡೆಸಲಾಗುತ್ತದೆ
ಎಂದು
ಹೇಳಿತ್ತು.
ಆದರೆ,
ವಿದ್ಯಾರ್ಥಿಗಳ
ಒತ್ತಾಯಕ್ಕೆ
ಮಣಿದು
ಪರೀಕ್ಷೆ
ದಿನಾಂಕ
ಬದಲಾವಣೆ
ಮಾಡಲಾಗಿದ್ದು,
ಮಾರ್ಚ್
31ರಂದು
ಪರೀಕ್ಷೆ
ನಡೆಯಲಿದೆ.
[ಪಿಯುಸಿ
ಪ್ರಶ್ನೆ
ಪತ್ರಿಕೆ
ಸೋರಿಕೆ
ಬಗ್ಗೆ
ಸಿಐಡಿ
ತನಿಖೆ]
ಮಾರ್ಚ್ 28ರಂದು ಕನ್ನಡ ಪರೀಕ್ಷೆ ಇದೆ. ಮರುದಿನ ರಸಾಯನ ಶಾಸ್ತ್ರ ಪರೀಕ್ಷೆ ಎದುರಿಸುವುದು ಕಷ್ಟ. ಆದ್ದರಿಂದ, ಮರು ಪರೀಕ್ಷೆಯ ದಿನಾಂಕ ಬದಲಾವಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದ್ದರಿಂದ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ. [ಪ್ರಶ್ನೆ ಪತ್ರಿಕೆ ಸೋರಿಕೆ : ರಸಾಯನಶಾಸ್ತ್ರ ಪರೀಕ್ಷೆ ರದ್ದು]
ಸಚಿವರ ಹೇಳಿಕೆ : ಗುರುವಾರ ವಿಧಾನಸೌಧದಲ್ಲಿ ವಿಧಾನಪರಿಷತ್ ಸದಸ್ಯರ ಜೊತೆ ಚರ್ಚೆ ನಡೆಸಿದ ಬಳಿಕ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡುವ ನಿರ್ಧಾರವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ತೆಗೆದುಕೊಂಡಿದ್ದಾರೆ. [ಪಿಯುಸಿ ಪರೀಕ್ಷೆ ವೇಳಾಪಟ್ಟಿ]
'ಮಾರ್ಚ್ 28ರಂದು ಕನ್ನಡ ಪರೀಕ್ಷೆ ಇದೆ. ಮರುದಿನ ರಸಾಯನ ಶಾಸ್ತ್ರ ಪರೀಕ್ಷೆ ಎದುರಿಸುವುದು ಕಷ್ಟ. ಆದ್ದರಿಂದ, ಮರು ಪರೀಕ್ಷೆಯ ದಿನಾಂಕ ಬದಲಾವಣೆ ಮಾಡಬೇಕು ಎಂಬ ಒತ್ತಾಯವಿತ್ತು. ಆದ್ದರಿಂದ, ಪರೀಕ್ಷೆ ದಿನಾಂಕ ಬದಲಾವಣೆ ಮಾಡಲಾಗಿದ್ದು ಮಾ.31ರ ಗುರುವಾರ ಪರೀಕ್ಷೆ ನಡೆಸಲಾಗುತ್ತದೆ' ಎಂದು ಸಚಿವರು ಹೇಳಿದರು.