ಪತ್ರಿಕೆ ಸೋರಿಕೆ, 11 ಖಾಸಗಿ ಕಾಲೇಜುಗಳ ಮೇಲೆ ಸಿಐಡಿ ದಾಳಿ
ಮಂಗಳೂರು, ಏಪ್ರಿಲ್ 16 : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ರಾಜ್ಯಾದ್ಯಂತ ಒಟ್ಟು 11 ಖಾಸಗಿ ಕಾಲೇಜುಗಳ ಮೇಲೆ ದಾಳಿ ನಡೆಸಿದ್ದಾರೆ.
ಶುಕ್ರವಾರ
ಬೆಂಗಳೂರಿನ
6,
ಬಳ್ಳಾರಿ
ಮತ್ತು
ಮಂಗಳೂರಿನ
2
ಕಾಲೇಜು
ಮತ್ತು
ತುಮಕೂರಿನ
ಒಂದು
ಕಾಲೇಜಿನ
ದಾಳಿ
ಮಾಡಿದ್ದಾರೆ.
ಮಾರ್ಚ್
21ರಂದು
ರಸಾಯನಶಾಸ್ತ್ರ
ಪ್ರಶ್ನೆ
ಪತ್ರಿಕೆ
ಸೋರಿಕೆಯಾಗಿತ್ತು.
ಈ
ಹಗರಣದ
ಕುರಿತು
ಸಿಐಡಿ
ಅಧಿಕಾರಿಗಳು
ತನಿಖೆ
ನಡೆಸುತ್ತಿದ್ದಾರೆ.
[ಪಿಯುಸಿ
ಪತ್ರಿಕೆ
ಉತ್ತರ
ಬರೆದು
ಮಾರುತ್ತಿದ್ದ
ಇಬ್ಬರ
ಬಂಧನ]
ಬೆಂಗಳೂರಿನ ವಿದ್ಯಾರಣ್ಯಪುರದ ನಾರಾಯಣ ಕಾಲೇಜು, ಚೈತನ್ಯಾ ಕಾಲೇಜು, ಯಲಹಂಕದ ದೀಕ್ಷಾ ಕಾಲೇಜು, ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜು, ಸಂಜಯ್ ನಗರದ ಪ್ರೆಸಿಡೆನ್ಸಿ ಕಾಲೇಜು, ಕಲ್ಯಾಣ ನಗರದ ರಾಯಲ್ ಕಾನ್ ಕಾರ್ಡ್ ಕಾಲೇಜುಗಳ ಮೇಲೆ ದಾಳಿ ನಡೆದಿದೆ. [ಶುರುವಾಗದ ಮೌಲ್ಯಮಾಪನ: ವಿದ್ಯಾರ್ಥಿಗಳ ಭವಿಷ್ಯ ಅಯೋಮಯ]
ಬಳ್ಳಾರಿಯ ನಾರಾಯಣ ಕಾಲೇಜು, ಚೈತನ್ಯಾ ಕಾಲೇಜು, ಮಂಗಳೂರಿನ ಎಕ್ಸ್ಪರ್ಟ್ ಕಾಲೇಜು ಮತ್ತು ಮಹೇಶ್ ಕಾಲೇಜು ಹಾಗೂ ತುಮಕೂರಿನ ದೀಕ್ಷಾ ಕಾಲೇಜಿನ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. [ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!]
ಬಂಧಿತರಾದವರು : ಅಂದಹಾಗೆ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಇದುವರೆಗೂ 8 ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ಪೂರ್ಣಪ್ರಜ್ಞಾ ಕಾಲೇಜಿನ ದೈಹಿಕ ಶಿಕ್ಷಕ ಅನಿಲ್, ಮತ್ತಿಕೆರೆ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸತೀಶ್.
ಬೆಂಗಳೂರಿನ ನಾಗರಬಾವಿಯ ಆದರ್ಶನಗರದ ಮಂಜುನಾಥ್, ಶ್ರೀರಾಮಪುರದ ಓಬಳರಾಜು ಹಾಗೂ ಮಲ್ಲೇಶ್ವರದ ಪಶ್ಚಿಮ ಪಾರ್ಕ್ ರಸ್ತೆಯ ರುದ್ರಪ್ಪ ಬಂಧಿತ ಆರೋಪಿಗಳು.