ಉಡುಪಿಯಲ್ಲೂ ನೀರಿಗೆ ಬರ, ಟ್ಯಾಂಕರ್ ಮೂಲಕ ನೀರು ಪೂರೈಕೆ
ಉಡುಪಿ, ಏಪ್ರಿಲ್ 20 : ಕುಂದಾಪುರ ಮತ್ತು ಉಡುಪಿಯ ತಲಾ 10 ಹಾಗೂ ಕಾರ್ಕಳದ ಒಂದು ಗ್ರಾಮ ಪಂಚಾಯಿತಿ ಸೇರಿದಂತೆ 21 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಉಡುಪಿಯಲ್ಲಿ
ಮಂಗಳವಾರ
ಮಾತನಾಡಿದ
ಜಿಲ್ಲಾ
ಉಸ್ತುವಾರಿ
ಸಚಿವ
ವಿನಯ್
ಕುಮಾರ್
ಸೊರಕೆ
ಅವರು,
'ಟ್ಯಾಂಕರ್
ಮೂಲಕ
ನೀರು
ಪೂರೈಕೆ
ಮಾಡುತ್ತಿರುವ
ಗ್ರಾಮಗಳಲ್ಲಿ
ತುರ್ತು
ಪರಿಹಾರ
ಕ್ರಮಗಳ
ಜೊತೆಗೆ
ಶಾಶ್ವತ
ಯೋಜನೆಗಳ
ಅನುಷ್ಟಾನಕ್ಕೂ
ಕ್ರಮ
ಕೈಗೊಳ್ಳಲಾಗಿದೆ'
ಎಂದು
ಹೇಳಿದರು.
[ಮಳೆಯಿಲ್ಲ,
ಬೆಳೆಯಿಲ್ಲ,
ಉತ್ತರದ
ಮಂದಿ
ಹೊಂಟರು
ಗುಳೆ]
'ಕುಡಿಯುವ ನೀರು ಪೂರೈಕೆಗಾಗಿ ಕ್ಷಿಪ್ರ ಕಾರ್ಯಪಡೆಗೆ 2.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಲ್ಲದೆ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ಕೇಂದ್ರ ಭಾಗಗಳಿಗೆ ಒಟ್ಟು 1.2 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಹೆಚ್ಚು ಆದ್ಯತೆ ನೀಡಿ, ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ' ಎಂದು ಸಚಿವರು ವಿವರಣೆ ನೀಡಿದರು. [ನೀಲಕಂಠರಾಯನಗಡ್ಡಿ ವಾಸಿಗಳಿಗೆ ನೀರು ಎಂದೂ ಶಾಪ!]
ಮರಳು ಬ್ಲಾಕ್ ಗೆ ಅನುಮತಿ : 'ಉಡುಪಿ ಜಿಲ್ಲೆಯಲ್ಲಿ ಮರಳಿನ ಸಮಸ್ಯೆಯನ್ನು ಸರಿಪಡಿಸಲು ಜಿಲ್ಲೆಯಲ್ಲಿ ತೆಗೆಯುವ ಮರಳನ್ನು ಜಿಲ್ಲೆಯಲ್ಲಿಯೇ ಬಳಸಲು ಕ್ರಮ ಕೈಗೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಿಆರ್ ಝಡ್ ವ್ಯಾಪ್ತಿಯ ಸುಮಾರು 301 ಕಡೆಗಳಲ್ಲಿ ಮರಳು ಬ್ಲಾಕ್ ಗಳನ್ನು ಗುರುತಿಸಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದುಕೊಳ್ಳಲಾಗಿದೆ' ಎಂದು ಸಚಿವರು ಹೇಳಿದ್ದಾರೆ. [ಭೀಕರ ಬರ, ಜನರ ಸುಲಿಗೆ ಮಾಡುತ್ತಿರುವ ಟ್ಯಾಂಕರ್ ಮಾಫಿಯಾ]
ಶೌಚಾಲಯ ನಿರ್ಮಾಣ : 'ಜಿಲ್ಲೆಗೆ ಸ್ವಚ್ಛ ಭಾರತ್ ಯೋಜನೆಯಡಿ 7.48 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಇದರಲ್ಲಿ 5,156 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಉಳಿದ ಅನುದಾನದಲ್ಲಿ 17 ಗ್ರಾಮಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲಾಗುತ್ತದೆ' ಎಂದು ಸಚಿವರು ತಿಳಿಸಿದರು.