ಸಚಿವ ಶರಣ ಪ್ರಕಾಶ್ ಪಾಟೀಲ್ಗೆ ಹೈಕೋರ್ಟ್ ಸಮನ್ಸ್
ಕಲಬುರಗಿ, ಆಗಸ್ಟ್ 31 : ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. 5 ದಿನಗಳಲ್ಲಿ ಕೋರ್ಟ್ ಮುಂದೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ನೀತಿ
ಸಂಹಿತೆ
ಉಲ್ಲಂಘನೆ
ಆರೋಪ
ಎದುರಿಸುತ್ತಿರುವ
ಸಚಿವರು
ಮೂರು
ಬಾರಿ
ಕೋರ್ಟ್
ನೀಡಿದ್ದ
ನೋಟಿಸ್ಗೆ
ಉತ್ತರ
ಕೊಟ್ಟಿರಲಿಲ್ಲ.
ಆದ್ದರಿಂದ,
ಬುಧವಾರ
5
ದಿನಗಳಲ್ಲಿ
ಖುದ್ದಾಗಿ
ಹಾಜರಾಗಬೇಕು
ಎಂದು
ಸಮನ್ಸ್
ಜಾರಿ
ಮಾಡಿದೆ.[ಜಿಲ್ಲಾ
ಪಂಚಾಯಿತಿ
ಅಧ್ಯಕ್ಷ,
ಉಪಾಧ್ಯಕ್ಷ
ಮೀಸಲು
ಪಟ್ಟಿ]
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಮಯದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬುದು ಆರೋಪ. ಚಿತ್ತಾಪುರದ ನಿವಾಸಿ ಅಬ್ದುಲ್ ರಬ್ ಅವರು ಸಚಿವರ ವಿರುದ್ಧ ದೂರು ನೀಡಿದ್ದರು.[30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]
ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಸಚಿವರು ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದರು ಮತ್ತು ಪ್ರದೇಶವನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದರು.[ತಾ.ಪಂ ಫಲಿತಾಂಶ : ಯಾವ ಜಿಲ್ಲೆಯಲ್ಲಿ ಯಾರಿಗೆ ಗೆಲುವು?]
ಅಬ್ದುಲ್ ರಬ್ ಅವರು ಸಚಿವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದರು. ಕೋರ್ಟ್ ಸಚಿವರಿಗೆ ಈ ಕುರಿತು ವಿವರಣೆ ನೀಡಲು 3 ಬಾರಿ ನೋಟಿಸ್ ನೀಡಿತ್ತು. ಆದರೆ, ಅವರು ಅದಕ್ಕೆ ಉತ್ತರ ನೀಡಿರಲಿಲ್ಲ.