ಬಾಂಗ್ಲಾದಲ್ಲಿ ಬಾಂಬ್ ಎಸೆದವರ ಮೇಲೆ ಪೊಲೀಸರ ಗುಂಡಿನ ದಾಳಿ
ಢಾಕಾ, ಜುಲೈ 07: ಬಾಂಗ್ಲಾದೇಶದ ಕಿಶೋರ್ ಗಂಜ್ ಜಿಲ್ಲೆಯಲ್ಲಿ ಈದ್ ಪ್ರಾರ್ಥನೆ ವೇಳೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಆದರೆ, ಇದು ಉಗ್ರರ ದಾಳಿಯಲ್ಲ, ರಾಜಕೀಯ ಪ್ರೇರಿತ ದಾಳಿ,ಪೊಲೀಸರನ್ನು ಗುರಿಯನ್ನಾಗಿಸಿ ದಾಳಿ ನಡೆಸಲಾಗಿದೆ ಎಂದು ಬಾಂಗ್ಲಾದೇಶ ಸರ್ಕಾರ ಘೋಷಿಸಿದೆ.
ಇತ್ತೀಚಿನ
ಅಪ್ಡೇಟ್ಸ್:
*
ಪೊಲೀಸ್
ದಾಳಿಗೆ
ಒಬ್ಬ
ಉಗ್ರ
ಹತ.
ಆರೇಳು
ಮಂದಿ
ಇನ್ನೂ
ಶಾಲೆಯಲ್ಲಿ
ಅಡಗಿರುವ
ಶಂಕೆ.
*
ಕೈಯಲ್ಲಿದ್ದ
ಬಾಂಬ್
ಖಾಲಿಯಾದ
ಮೇಲೆ
ಚಾಕು,
ಚೂರಿ
ಹಿಡಿದುಕೊಂಡು
ನಿಂತಿರುವ
ಉಗ್ರರು.
*
ದಾಳಿ
ನಡೆಸಿದವರು
ಅಜಿಮುದ್ದೀನ್
ಶಾಲೆಯಲ್ಲಿ
ಅಡಗಿ
ಕುಳಿತ್ತಿದ್ದು,
ಅವರ
ಮೇಲೆ
ಪೊಲೀಸರು
ಗುಂಡಿನ
ದಾಳಿ
ನಡೆಸಿದ್ದಾರೆ.
*
ಬಾಂಬ್
ಸ್ಫೋಟದಲ್ಲಿ
ಮೃತರಾದ
ಪೊಲೀಸ್
ಸಿಬ್ಬಂದಿಯನ್ನು
ಝಾಹಿರುಲ್
ಇಸ್ಲಾಮ್
ಎಂದು
ಗುರುತಿಸಲಾಗಿದೆ.
ಸುಮಾರು
3
ಲಕ್ಷಕ್ಕೂ
ಅಧಿಕ
ಮಂದಿ
ಇಲ್ಲಿನ
ಶೋಲ್ಕಿಯಾ
ಮೈದಾನದಲ್ಲಿ
ಬಾಂಬ್
ಸ್ಫೋಟ
ಸಂಭವಿಸಿದ್ದು
3
ಮಂದಿ
ಸಾವನ್ನಪ್ಪಿದ
ವರದಿಗಳು
ಬಂದಿವೆ.
ಸುಮಾರು
12ಕ್ಕೂ
ಅಧಿಕ
ಪೊಲೀಸ್
ಸಿಬ್ಬಂದಿಗೆ
ತೀವ್ರ
ಗಾಯಗಳಾಗಿವೆ.
[ಕಹಿ
ನೆನಪು
:
ರಂಜಾನ್
ಮುನ್ನಾದಿನ
ಇರಾಕಿನಲ್ಲಿ
ಭೀಕರ
ಹತ್ಯಾಕಾಂಡ]
ದಾಳಿ ನಡೆಸಿದ ದುಷ್ಕರ್ಮಿಗಳು ಸಮೀಪದ ಮನೆಯೊಂದರಲ್ಲಿ ಅಡಗಿರುವ ಶಂಕೆ ವ್ಯಕ್ತವಾಗಿದೆ.ವಾರದೊಳಗೆ ಎರಡನೇ ಬಾರಿ ಬಾಂಗ್ಲಾದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಆದರೆ, ಕಿಶೋರ್ ಗಂಜ್ ನಲ್ಲಿನ ಸ್ಫೋಟವನ್ನು ರಾಜಕೀಯ ಪ್ರೇರಿತ ದಾಳಿ ಎಂದು ಬಾಂಗ್ಲಾದೇಶದ ವಾರ್ತಾ ಸಚಿವರು ಹೇಳಿದ್ದಾರೆ. [ಕಹಿ ನೆನಪು : ಸೌದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ]
ಇತ್ತೀಚಿನ ಬಾಂಬ್ ಸ್ಫೋಟದಲ್ಲಿ 20 ಮಂದಿ ಸಾವನ್ನಪ್ಪಿದ್ದರು. ಈ ದಾಳಿ ಹಿಂದೆ ಉಗ್ರರ ಕೈವಾಡ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ, ಐಎಸ್ ಐಎಸ್ ಇತ್ತೀಚೆಗೆ ವಿಡಿಯೋ ಬಿಡುಗಡೆ ಮಾಡಿ ಹೆಚ್ಚೆಚ್ಚು ದಾಳಿ ನಡೆಸುವುದಾಗಿ ಘೋಷಿಸಿತ್ತು. ಆದರೆ, ಈ ಎಚ್ಚರಿಕೆ ಗಂಟೆಯನ್ನು ಬಾಂಗ್ಲಾದೇಶ ಸರ್ಕಾರ ಲಘುವಾಗಿ ತೆಗೆದುಕೊಂಡಿದೆ.