ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೇಪಾಳ: ಬಸ್ ಅಪಘಾತ, ಭಾರತದ ಯಾತ್ರಿಗಳ ಸಾವು
ಕಠ್ಮಂಡು, ಏ.22: ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಬಸ್ ಅಪಘಾತದಲ್ಲಿ 12 ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ಭಾರತದ ಯಾತ್ರಾರ್ಥಿಗಳು ಪಶುಪತಿನಾಥ ದೇಗುಲ ದರ್ಶನ ಮುಗಿಸಿಕೊಂಡು ಗೋರಖ್ ಪುರಕ್ಕೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಕಠ್ಮಂಡುವಿನಿಂದ ಗೋರಖ್ಪುರಕ್ಕೆ ಹೊರಟಿದ್ದ ಖಾಸಗಿ ಬಸ್ ಧಾಡಿಂಗ್ ಜಿಲ್ಲೆಯ ನೌಬಿಸೆ ಗ್ರಾಮದ ಬಳಿ ಬೆಟ್ಟದಿಂದ ಕೆಳಗುರುಳಿದಿದೆ. ನೇಪಾಳದಿಂದ ಸುಮಾರು 50-60 ಕಿ.ಮೀ ದೂರದಲ್ಲಿ ಜೈಪ್ರಿ ನದಿ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.
ಮೃತಪಟ್ಟವರು ಎಲ್ಲರೂ ಗುಜರಾತ್ ಮೂಲದವರು ಎಂದು ತಿಳಿದು ಬಂದಿದೆ. ಇವರೆಲ್ಲ ನೇಪಾಳ ಪ್ರವಾಸ ಕೈಗೊಂಡಿದ್ದರು. ಗಾಯಗೊಂಡವರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ನೇಪಾಳದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಸ್ ನದಿಗೆ ಬಿದ್ದು , 20 ಜನ ಮೃತಪಟ್ಟಿದ್ದರು.[ವರದಿ ಇಲ್ಲಿ ಓದಿ] (ಪಿಟಿಐ)
Comments
English summary
Twelve Indian pilgrims were killed and more than 30 injured after a bus veered off the highway and rolled down 150 meters before plunging into a river in Nepal on Wednesday, police said.