ಶಾರುಖ್ ಖಾನ್, ಹಫೀಜ್ ಸಯೀದ್ ಇಬ್ಬರು ಒಂದೇ: ಯೋಗಿ
ನವದೆಹಲಿ, ನ.04: ಕಿಂಗ್ ಖಾನ್ ಶಾರುಖ್ ಗೆ ಹುಟ್ಟುಹಬ್ಬದ ದಿನದಿಂದ ಯಾಕೋ ಟೈಂ ಸರಿಯಿಲ್ಲ. ಶಾರುಖ್ ಖಾನ್ ಅವರು ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದೇ ತಡ, ಬಿಜೆಪಿ ಮುಖಂಡರು ಒಬ್ಬರಾದ ಮೇಲೆ ಒಬ್ಬರು ಶಾರುಖ್ ವಿರುದ್ಧ ಹರಿಹಾಯ್ದಿದ್ದಾರೆ.
ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಗೂ ಶಾರುಖ್ ಖಾನ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಅವರು ಶಾರುಖ್ ಖಾನ್ ಅವರ ವಿರುದ್ಧ ಕಿಡಿಕಾರಿ, ಪಾಕಿಸ್ತಾನಕ್ಕೆ ಬೇಕಾದರೆ ಹೋಗಲಿ ಎಂದು ನಂತರ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದರು. [ಸೂರ್ಯ ನಮಸ್ಕಾರ ವಿರೋಧಿಗಳನ್ನು ಕೂಪಕ್ಕೆ ತಳ್ಳಿ: ಯೋಗಿ]
ಬುಧವಾರದಂದು ಹರಿತ ನಾಲಿಗೆಯ ಗೋರಖ್ ಪುರದ ಸಂಸದ ಯೋಗಿ ಆದಿತ್ಯನಾಥ್ ಅವರು ಶಾರುಖ್ ಖಾನ್ ರನ್ನು ಉಗ್ರ ಸಂಘಟನೆಯ ಮುಖ್ಯಸ್ಥ, 2008ರ ಮುಂಬೈ ಉಗ್ರರ ದಾಳಿಯ ರೂವಾರಿ ಹಫೀಜ್ ಸಯೀದ್ ಗೆ ಹೋಲಿಸಿದ್ದಾರೆ.
"Mujhe lagta hai Shah Rukh Khan ki bhasha mein aur Hafiz Saeed ki bhaasha mein koi antar nahi hai" ಇಬ್ಬರ ಭಾಷೆ ಪ್ರಯೋಗದಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದಿದ್ದಾರೆ.
ಕೆಲ
ದಿನಗಳ
ಹಿಂದೆ
ಸಾಧ್ವಿ
ಪ್ರಾಚಿ
ಅವರು
ಮಾತನಾಡಿ,
ಶಾರುಖ್
ರನ್ನು
ಪಾಕಿಸ್ತಾನಿ
ಐಎಸ್
ಐ
ಏಜೆಂಟ್
ಎಂದು
ಕರೆದಿದ್ದರು.
ಶಾರುಖ್
ಖಾನ್
ಗೆ
ನೀಡಿದ
ಪ್ರಶಸ್ತಿಗಳನ್ನು
ವಾಪಸ್
ಪಡೆಯುವಂತೆ
ಆಗ್ರಹಿಸಿದ್ದರು.
ಬಿಜೆಪಿ ಮುಖಂಡ ವಿಜಯ್ ವರ್ಗಿಯಾ ಕಿಡಿಕಾರಿದ್ದರು
ಶಾರುಖ್ ಖಾನ್ ಅವರು ಭಾರತದಲ್ಲಿ ನೆಲೆಸಿದ್ದಾರೆ. ಆದರೆ, ಅವರ ಆತ್ಮ ಪಾಕಿಸ್ತಾನದಲ್ಲಿದೆ. ಆತನ ಸಿನಿಮಾಗಳು ಇಲ್ಲಿ ಕೋಟಿಗಟ್ಟಲೇ ಗಳಿಸುತ್ತವೆ ಅದರೆ, ಭಾರತದಲ್ಲಿ ಅಸಹಿಷ್ಣುತೆ ಎದ್ದು ಕಾಣುತ್ತಿದೆಯಮ್ತೆ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಮುಖಂಡ ವಿಜಯ್ ವರ್ಗಿಯಾ ಕಿಡಿಕಾರಿದ್ದರು.
ಮೋದಿ ಸರ್ಕಾರದ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಭೂ ಸಾರಿಗೆ ಸಚಿವ ವೆಂಕಯ್ಯ ನಾಯ್ಡು, ವಿಜಯ್ ಹಾಗೂ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ವೈಯಕ್ತಿಕವಾಗಿದ್ದು, ಶಾರುಖ್ ಅವರ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯಿಸಬೇಕಾಗಿಲ್ಲ ಎಂದಿದ್ದಾರೆ.
|
ಪಾಕಿಸ್ತಾನಕ್ಕೆ ಬಂದರೆ ಭವ್ಯ ಸ್ವಾಗತ ನೀಡುತ್ತೇವೆ
ಶಾರುಖ್ ಖಾನ್ ಅವರು ಪಾಕಿಸ್ತಾನಕ್ಕೆ ಬಂದರೆ ಭವ್ಯ ಸ್ವಾಗತ ನೀಡುತ್ತೇವೆ ಎಂದು ಉಗ್ರ ಸಂಘಟನೆ ಮುಖ್ಯಸ್ಥರು ಘೋಷಿಸಿದ್ದಾರೆ.
|
ಎಲ್ಲರಿಗೂ ಮುಕ್ತ ಸ್ವಾಗತವಿದೆ
ಭಾರತದಲ್ಲಿರುವ ಮುಸ್ಲಿಮರು ಕ್ರೀಡೆ, ಶೈಕ್ಷಣಿಕ, ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ, ಸೂಕ್ತ ಬೆಲೆ ಸಿಗದ ಕಾರಣ ಮೂಲೆಗುಂಪಾಗುತ್ತಿದ್ದಾರೆ. ಕಷ್ಟದ ಪರಿಸ್ಥಿತಿ ಎದುರಿಸಿ ವ್ಯಕ್ತಿತ್ವ ಕಳೆದುಕೊಳ್ಳುವುದಕ್ಕಿಂತ ಪಾಕಿಸ್ತಾನಕ್ಕೆ ಬನ್ನಿ ಎಂದ ಉಗ್ರ ಸಂಘಟನೆ.