ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನ್ಯಾ. ಕರ್ಣನ್ ಗಾಗಿ ಶೋಧ ನಡೆಸಿ ಸುಸ್ತಾದ ಪೊಲೀಸರು
ನ್ಯಾಯಾಂಗ ನಿಂದನೆ ಆರೋಪದಡಿ ಸುಪ್ರೀಂ ಕೋರ್ಟ್ ನ್ಯಾ. ಕರ್ಣನ್ ಅವರಿಗೆ 6 ತಿಂಗಳ ಜೈಲು ವಾಸ ವಿಧಿಸಿದೆ. ತೀರ್ಪು ಹೊರಬಿದ್ದ ತಕ್ಷಣವೇ ಅವರನ್ನು ಬಂಧಿಸಬೇಕಿದ್ದರಿಂದ ನ್ಯಾ. ಕರ್ಣನ್ ಕಾರ್ಯಕ್ಷೇತ್ರವಾದ ಕೋಲ್ಕತಾದ ಪೊಲೀಸರು ಶೋಧ ನಡೆಸಿದ್ದಾರೆ.
ಚೆನ್ನೈ, ಮೇ 10: ಸುಪ್ರೀಂ ಕೋರ್ಟ್ ನಿಂದ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಶ್ಚಿಮ ಬಂಗಾಳ ಹೈಕೋರ್ಟ್ ನ ನ್ಯಾಯಮೂರ್ತಿ ಕರ್ಣನ್ ಅವರನ್ನು ಬಂಧಿಸಲು ಚೆನ್ನೈಗೆ ಆಗಮಿಸಿರುವ ಪಶ್ಚಿಮ ಬಂಗಾಳದ ಪೊಲೀಸರು ಕರ್ಣನ್ ಅವರಿಗಾಗಿ ವ್ಯಾಪಕ ಶೋಧ ನಡೆಸಿದ್ದಾರೆ. ಆದರೂ, ಕರ್ಣನ್ ಅವರು ಪತ್ತೆಯಾಗಿಲ್ಲ.
ನ್ಯಾಯಾಂಗ ನಿಂದನೆ ಆರೋಪದಡಿ ಸುಪ್ರೀಂ ಕೋರ್ಟ್ ನ್ಯಾ. ಕರ್ಣನ್ ಅವರಿಗೆ 6 ತಿಂಗಳ ಜೈಲು ವಾಸ ವಿಧಿಸಿದೆ. ತೀರ್ಪು ಹೊರಬಿದ್ದ ತಕ್ಷಣವೇ ಅವರನ್ನು ಬಂಧಿಸಬೇಕಿದ್ದರಿಂದ ನ್ಯಾ. ಕರ್ಣನ್ ಅವರ ಕಾರ್ಯಕ್ಷೇತ್ರವಾದ ಕೋಲ್ಕತಾದ ಪೊಲೀಸರು ಕೋಲ್ಕತಾದಲ್ಲಿ ಅವರಿಗಾಗಿ ಜಾಲಾಡಿದ್ದಾರೆ.[ನ್ಯಾಯಮೂರ್ತಿ ಕರ್ಣನ್ ಗೆ ಸುಪ್ರೀಂ ಆರು ತಿಂಗಳು ಜೈಲು]
ಆದರೆ, ಕರ್ಣನ್ ಅವರು ಅವರ ಮೂಲಸ್ಥಳವಾದ ಚೆನ್ನೈಗೆ ಬಂದಿರುವ ಮಾಹಿತಿಯ ಮೇರೆಗೆ ಚೆನ್ನೈಗೆ ಆಗಮಿಸಿ, ತಮಿಳುನಾಡು ಪೊಲೀಸ್ ಇಲಾಖೆಯ ಸಹಾಯ ಪಡೆದು ಅವರಿಗಾಗಿ ತಲಾಶ್ ನಡೆಸಿದೆ. ಆದರೆ, ಕರ್ಣನ್ ಅವರು ಪತ್ತೆಯಾಗಿಲ್ಲ. ಈ ಬೆಳವಣಿಗೆ ಕರ್ಣನ್ ವಿಚಾರದಲ್ಲಿ ಕುತೂಹಲ ಕೆರಳಿಸಿದೆ.
Comments
English summary
Police teams from two states are still running in circles and are on a wild goose chase, as they are unable to locate+ the Calcutta high court judge, Justice C S Karnan.