ಜಾತ್ಯಾತೀತ ಪಕ್ಷಗಳ ವಿರುದ್ಧ ಸಿಎಂ ಯೋಗಿ ಗುಡುಗು
ಕೇಂದರ್ ಸರ್ಕಾರದ ಕಸಾಯಿ ಖಾನೆಗಳಿಗೆ ಗೋವುಗಳ ಮಾರಾಟ ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅಲ್ಲಲ್ಲಿ ನಡೆಸಲಾಗಿರುವ ಬೀಫ್ ಫೆಸ್ಟ್ ಗಳ ಬಗ್ಗೆ ಮಾತನಾಡುವ ಜಾತ್ಯಾತೀತ ಪಕ್ಷಗಳ ನಿಲುವನ್ನು ಪ್ರಶ್ನಿಸಿರುವ ಉತ್ತರ ಪ್ರದೇಶ ಯೋಗಿ
ಲಕ್ನೋ, ಮೇ 29: ಕಸಾಯಿಖಾನೆಗಳಿಗೆ ಗೋ ಮಾರಾಟ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ, ದೇಶದ ಅಲ್ಲಲ್ಲಿ ಬೀಫ್ ಫೆಸ್ಟ್ ಗಳನ್ನು ನಡೆಸಿರುವುದರ ಬಗ್ಗೆಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಜಾತ್ಯಾತೀತ ಪಕ್ಷಗಳನ್ನು ಟೀಕಿಸಿರುವ ಅವರು, ಈ ಫೆಸ್ಟ್ ಗಳು ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ? ನೀವೇಕೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ದೆಹಲಿ ಹಾಗೂ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಹಾಗೂ ಚೆನ್ನೈನ ಐಐಟಿಯಲ್ಲಿ ಬೀಫ್ ಫೆಸ್ಟ್ ಆಯೋಜಿಸಲಾಗಿತ್ತು.[ಬೀಫ್ ಫೆಸ್ಟ್ : ಕವಯಿತ್ರಿಗೆ ಮುಸ್ಲಿಂರಿಂದಲೇ ಮಂಗಳಾರತಿ]
ಈ ಹಿನ್ನೆಲೆಯಲ್ಲಿ, ಸೋಮವಾರ ಎಬಿವಿಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, ರಾಷ್ಟ್ರದಲ್ಲಿ ಚರ್ಚಿಸಬೇಕಾದ ಹಲವಾರು ಗಂಭೀರ ವಿಚಾರಗಳಿವೆ. ಬೀಫ್ ಫೆಸ್ಟ್ ಬಗ್ಗೆ ಜಾತ್ಯತೀತವಾದಿಗಳ ಮೌನವೇಕೆ ಎಂದು ಅವರು ಪ್ರಶ್ನಿಸಿದ್ದಾರೆ.[ಗೋ ಹತ್ಯೆ ನಿಷೇಧ: ಕೇರಳದ ನಿಲುವು ಸಮರ್ಥಿಸಿದ ಸಿದ್ದರಾಮಯ್ಯ]