LIVE: ಮೋದಿ ರಾಜ್ಯಧರ್ಮ ನಿಭಾಯಿಸುತ್ತಿದ್ದಾರೆ: ರಾಮ್ ದೇವ್
ಉತ್ತರಪ್ರದೇಶ ರಾಜ್ಯದಲ್ಲಿ ಎರಡನೇ ಹಂತ ಹಾಗೂ ಉತ್ತರಾಖಂಡ ರಾಜ್ಯದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬುಧವಾರ (ಫೆ.15) ನಡೆಯುತ್ತಿದೆ. ಮೋದಿ ಬಗ್ಗೆ ಹೊಗಳುತ್ತಾ, ಬಾಬಾ ರಾಮ್ ದೇವ್ ಮತದಾನ
ಲಕ್ನೋ, ಫೆಬ್ರವರಿ 15: ಎರಡು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಬುಧವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಉತ್ತರಪ್ರದೇಶ ರಾಜ್ಯದಲ್ಲಿ ಎರಡನೇ ಹಂತ ಹಾಗೂ ಉತ್ತರಾಖಂಡ ರಾಜ್ಯದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬುಧವಾರ (ಫೆ.15) ನಡೆಯುತ್ತಿದೆ.
[5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ: ನಿಮಗಿದು ತಿಳಿದಿರಲಿ]
ಉತ್ತರ ಪ್ರದೇಶದ 67 ಕ್ಷೇತ್ರಗಳಲ್ಲಿ ಹಾಗೂ ಉತ್ತರಾಖಂಡದ 70 ವಿಧಾನಸಭಾ ಸ್ಥಾನಗಳಲ್ಲಿ 69 ಸ್ಥಾನಗಳಿಗೆ ಮತದಾನ ನಡೆಸಲಾಗುತ್ತಿದೆ.[ಮೊದಲ ಹಂತ: ಉತ್ತರಪ್ರದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ]
*
ಮಧ್ಯಾಹ್ನ
1
ಗಂಟೆ
ವೇಳೆಗೆ
ಶೇ
40ರಷ್ಟು
ಮತದಾನ
ದಾಖಲು
40% voting in #Uttarakhand till 1 pm pic.twitter.com/R8qeVbOq6e
— ANI (@ANI_news) February 15, 2017
* ಉತ್ತರಾಖಂಡ್ ನಲ್ಲಿ ಸಿಎಂ ಹರೀಶ್ ರಾವತ್ ರಿಂದ ಮತದಾನ
* 11 ಗಂಟೆಗೆ ಉತ್ತರಾಖಂಡ್ ನಲ್ಲಿ ಶೇ 24ರಷ್ಟು ಮತದಾನ ದಾಖಲು.
#Uttarakhand: Baba Ramdev casts his vote at polling booth no.106 in Haridwar,says 'Modiji poori pramanikta se apna rajdharm nibha rahe hain' pic.twitter.com/SV3nj5lAxV
— ANI (@ANI_news) February 15, 2017
* ಮತದಾನ ಮಾಡಿದ ಬಾಬಾ ರಾಮ್ ದೇವ್, ಮೋದಿಯನ್ನು ಹಾಡಿ ಹೊಗಳಿದರು. ಮೋದಿ ತಮ್ಮ ರಾಜ್ಯಧರ್ಮವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.
* ಉತ್ತರ ಪ್ರದೇಶದ 67 ಕ್ಷೇತ್ರಗಳ ಒಟ್ಟು ಮತದಾರರಲ್ಲಿ ಶೇ 80 ರಷ್ಟು ಮಂದಿ ಒಬಿಸಿ ಮತ್ತು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. [ಪಂಚರಾಜ್ಯದ ಚುನಾವಣೆಗೆ ಮೈಸೂರಿನಿಂದ ಮಸಿ ಬಳಕೆ!]
* 2012ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್ಪಿ) 34 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಎಸ್ ಪಿ ಮತ್ತು ಬಿಜೆಪಿ ಕ್ರಮವಾಗಿ 11 ಹಾಗೂ 10 ಸ್ಥಾನಗಳನ್ನು ಗೆದ್ದುಕೊಂಡಿದ್ದವು.
Visuals from Moradabad: Polling for 67 assembly constituencies of #UttarPradesh in the second of seven phases, set to take place today. pic.twitter.com/sPfpxPKnDY
— ANI UP (@ANINewsUP) February 15, 2017
* ಉತ್ತರಾಖಂಡದ ಇನ್ನೊಂದು ಕ್ಷೇತ್ರದ ಮತದಾನವನ್ನು ಮಾರ್ಚ್ 9ಕ್ಕೆ ಮುಂದೂಡಲಾಗಿದೆ. [ಉತ್ತರಾಖಂಡ್ ಅಸೆಂಬ್ಲಿ ಕಣದಲ್ಲಿ 200 ಮಂದಿ ಕೋಟ್ಯಧಿಪತಿಗಳು]
* ಬಿಎಸ್ ಪಿ ಅಭ್ಯರ್ಥಿ ಕುಲದೀಪ್ ಸಿಂಗ್ ಅವರು ಅಪಘಾತಕ್ಕೀಡಾಗಿ ನಿಧನರಾದ ಕಾರಣ ಕರ್ಣಪ್ರಯಾಗ್ ಕ್ಷೇತ್ರದ ಮತದಾನ ಮುಂದೂಡಲಾಗಿದೆ.(ಒನ್ಇಂಡಿಯಾ ಸುದ್ದಿ)