ನ.3: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.3: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
14.30:
ವಾಸನ್
ರನ್ನು
ಪಕ್ಷಕ್ಕೆ
ವಾಪಸ್
ಕರೆ
ತರಲು
ಯತ್ನಿಸಲಾಗುತ್ತಿದೆ
ಎಂದು
ತಮಿಳುನಾಡಿನ
ಕಾಂಗ್ರೆಸ್
ಮುಖ್ಯಸ್ಥ
ಇವಿಕೆಎಸ್
ಇಳಂಗೋವನ್
ಹೇಳಿದ್ದಾರೆ.
14.20:
ತಮಿಳುನಾಡಿನ
ಪ್ರಮುಖ
ಕಾಂಗ್ರೆಸ್
ನಾಯಕ
ಜಿಕೆ
ವಾಸನ್
ಅವರು
ಪಕ್ಷ
ತೊರೆದಿದ್ದಾರೆ.
ಹೊಸ
ಪಕ್ಷವನ್ನು
ಸ್ಥಾಪಿಸುವ
ಹುಮ್ಮಸ್ಸಿನಲ್ಲಿದ್ದಾರೆ.
13.30: ದೆಹಲಿ ರಾಜ್ಯಪಾಲ ನಸೀಬ್ ಜಂಗ್ ಅವರ ಬಳಿ 'ಸರ್ಕಾರ ರಚಿಸಲು ಸಾಧ್ಯವಿಲ್ಲ' ಎಂದು ಬಿಜೆಪಿ ಹೇಳಿಕೊಂಡಿದೆ. ಹೀಗಾಗಿ ಚುನಾವಣೆ ಅನಿವಾರ್ಯವಾಗಿದ್ದು, 2015ರ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.
12.30:
ದೆಹಲಿ
ಸರ್ಕಾರ
ರಚನೆ
ಬಗ್ಗೆ
ಎಎಪಿ
ಮುಖಂಡ
ಅರವಿಂದ್
ಕೇಜ್ರಿವಾಲ್
ಪ್ರತಿಕ್ರಿಯೆ
BJP
has
conveyed
"informally"
to
LG
and
media
that
they
are
not
in
a
position
to
form
government
in
Delhi.
What
is
BJP's
"formal"
stand?
—
Arvind
Kejriwal
(@ArvindKejriwal)
November
3,
2014
9.30: ದೆಹಲಿಯಲ್ಲಿ ಸರ್ಕಾರ ಸ್ಥಾಪನೆ ಸಾಧ್ಯವಾಗದಿದ್ದರೆ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಸರ್ಕಾರ ರಚನೆ ವಿಷಯದ ಬಗ್ಗೆ ಸೋಮವಾರ ಸಂಜೆ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆಯಿದೆ.
9.15: ಹಿಂದಿ ಚಿತ್ರರಂಗದ ಹಿರಿಯ ನಟ 'ಸಡಕ್' ಖ್ಯಾತಿಯ ಸದಾಶಿವ ಅಮರಾಪುರ್ಕರ್ ಅವರು ಮುಂಬೈನ ಕೋಕಿಲಾ ಬೇನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
9.10: ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಸೋಮವಾರ ಪ್ರಕಟವಾಗಿದೆ.
9.00: ವಾಘಾ ಗಡಿ ಭಾಗದಲ್ಲಿ ನಡೆದ ಉಗ್ರರ ದುಷ್ಕೃತ್ಯಕ್ಕೆ ಎಲ್ಲೆಡೆಯಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.