ನ.28: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.28: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
18.00: ಸ್ವಯಂಘೋಷಿತ ದೇವಮಾನವ ಸಂತ ರಾಂಪಾಲ್ ಪತ್ತೆ ಮತ್ತು ಬಂಧನಕ್ಕೆ ವೆಚ್ಚವಾಗಿರುವುದು ಬರೋಬ್ಬರಿ 26 ಕೋಟಿ ರುಪಾಯಿ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ಹೇಳಿದೆ.
11.10: ಆಲಿಘಟ್ ವಿವಿ ಕುಲಪತಿ ಅವರಿಂದ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ರಾಜ ಮಹೇಂದ್ರ ಸಿಂಗ್ ಹುಟ್ಟುಹಬ್ಬ ಆಚರಣೆಗೆ ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ವಿವಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
10.45:
ಸಂಸತ್ತಿನ
ಹೊರಗಡೆ
ಟಿಎಂಸಿ
ಸಂಸದರ
ಪ್ರತಿಭಟನೆ
ಮುಂದುವರೆದಿದೆ.
MNREGA
ಯೋಜನೆ
ಅವ್ಯವಹಾರದ
ವಿರುದ್ಧ
ಪ್ರತಿಭಟನೆ
ಶುರು
ಮಾಡಿಕೊಂಡಿದ್ದಾರೆ.
10.20: ಬಿಎಸ್ ಇ ಸೆನ್ಸೆಕ್ಸ್ ಮತ್ತೊಮ್ಮೆ ಜಿಗಿತ ಕಂಡಿದ್ದು, ಬಂಡವಾಳ ಹೂಡಿಕೆ ಮೌಲ್ಯ 100 ಟ್ರಿಲಿಯನ್ ರು ಮಾರ್ಕ್ ದಾಟಿದೆ. ಹೂಡಿಕೆದಾರರ ಮೊತ್ತ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ.
10.15: ನೇಪಾಳದಿಂದ ಹಿಂತಿರುಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಣಿವೆ ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣಾ ಪ್ರಚಾರದಲ್ಲಿ ನಿರತರಾಗಲಿದ್ದಾರೆ.