ಮಧ್ಯಪ್ರದೇಶದಲ್ಲಿ ಅವಳಿ ರೈಲು ದುರಂತ, 29 ಸಾವು
ಭೋಪಾಲ್, ಆಗಸ್ಟ್ 5 : ಅವಳಿ ರೈಲು ದುರಂತದಲ್ಲಿ 29 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ನಾನು ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. [ರೈಲು ದುರಂತದ ಚಿತ್ರಗಳು]
ಸಮಯ 10.30 : ರೈಲು ದುರಂತದಲ್ಲಿ ಮೃತಪಟ್ಟವರ ಶವಗಳನ್ನು ಹೊರತೆಗೆಯಲಾಗುತ್ತಿದೆ. 8 ಪುರುಷ, 10 ಮಹಿಳೆ ಮತ್ತು 5 ಮಕ್ಕಳ ಶವಗಳನ್ನು ಹೊರತೆಗೆಯಲಾಗಿದೆ.
ಸಮಯ
9.30
:
ಅವಳಿ
ರೈಲು
ದುರಂತದಲ್ಲಿ
ಮೃತಪಟ್ಟವರಿಗೆ
ರೈಲ್ವೆ
ಇಲಾಖೆ
ಪರಿಹಾರ
ಘೋಷಣೆ
ಮಾಡಿದೆ.
ಮೃತಪಟ್ಟವರಿಗೆ
2
ಲಕ್ಷ,
ಗಂಭೀರವಾಗಿ
ಗಾಯಗೊಂಡವರಿಗೆ
50
ಸಾವಿರ
ಮತ್ತು
ಸಣ್ಣ-ಪುಟ್ಟ
ಗಾಯಗಳಾದವರಿಗೆ
25
ಸಾವಿರ
ಪರಿಹಾರ
ಘೋಷಣೆ
ಮಾಡಲಾಗಿದೆ.
ಸಮಯ
9
ಗಂಟೆ
:
ಹರ್ದಾ
ಜಿಲ್ಲೆಯ
ಕುಡುವಾ
ಗ್ರಾಮದ
ಬಳಿ
ಸಂಭವಿಸಿದ
ಅವಳಿ
ರೈಲು
ದುರಂತದಲ್ಲಿ
ಮೃತಪಟ್ಟವರ
ಸಂಖ್ಯೆ
30ಕ್ಕೆ
ಏರಿಕೆಯಾಗಿದೆ.
ಜನತಾ
ಎಕ್ಸ್ಪ್ರೆಸ್
ರೈಲಿನ
10,
ಕಾಮಾಯಾನಿ
ರೈಲಿನಲ್ಲಿ
ಪ್ರಯಾಣಿಸುತ್ತಿದ್ದ
20
ಜನರು
ಮೃತಪಟ್ಟಿದ್ದಾರೆ.
ಸಮಯ
8.30
:
ಅವಳಿ
ರೈಲು
ಅಪಘಾತದಿಂದಾಗಿ
25ಕ್ಕೂ
ಹೆಚ್ಚು
ರೈಲುಗಳ
ಸಂಚಾರದಲ್ಲಿ
ವ್ಯತ್ಯಯ
ಉಂಟಾಗಿದೆ.
ಮುಂಬೈನಿಂದ
ಬರಬೇಕಿದ್ದ
ರೈಲುಗಳ
ಮಾರ್ಗಗಳನ್ನು
ಬದಲಾವಣೆ
ಮಾಡಲಾಗಿದೆ.
ಪಂಜಾಬ್,
ಉತ್ತರ
ಪ್ರದೇಶ,
ಮಧ್ಯಪ್ರದೇಶದಿಂದ
ಬರಬೇಕಿದ್ದ
12
ರೈಲುಗಳ
ಸಂಚಾರವನ್ನು
ರದ್ದುಗೊಳಿಸಲಾಗಿದೆ.
[ಮಂಗಳೂರಿನಲ್ಲಿ
ರೈಲು
ಅಪಘಾತ
ತಪ್ಪಿಸಿದ
ರೈತ]
Horrible
#TrainTragedy
site
at
Harda.
@NewsEighteen
collegue
@manojkhandekar
reports
frm
MP.@ibnlive
@ibnkhabar
pic.twitter.com/kDTgIUIozw
—
Pranay
Upadhyaya
(@JournoPranay)
August
5,
2015
ಸಮಯ 8 ಗಂಟೆ : 'ರೈಲ್ವೆ ಅಪಘಾತದಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಧಿಸುತ್ತೇನೆ. ಪ್ರಯಾಣಿಕರನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.
My
prayers
with
the
injured.
Authorities
are
doing
everything
possible
on
the
ground.
The
situation
is
being
monitored
very
closely.
—
Narendra
Modi
(@narendramodi)
August
5,
2015
ಸಮಯ 7.30 : ಮಚಕ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಘಟನೆಯಿಂದಾಗಿ ಹರ್ದಾ ಬಳಿಯ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು 6 ಕಿ.ಮೀ ತನಕ ವಾಹನಗಳು ಸಾಲುಗಟ್ಟಿ ನಿಂತಿವೆ.
ಸಮಯವಾಣಿ ಸಂಖ್ಯೆಗಳು : ಹರ್ದಾ ಬಳಿ ಸಂಭವಿಸಿದ ರೈಲು ದುರಂತದಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದೆ. ಜನರ ಸಹಾಯಕ್ಕಾಗಿ ಮಧ್ಯಪ್ರದೇಶ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ.
Two
Railway
helpline
No.s
have
been
issued-
05422503814,
62733:
Faheem,
Dy
Station
Supritendent
on
MP
train
accident
pic.twitter.com/nZESx8UY58
—
ANI
(@ANI_news)
August
5,
2015
ಅವಳಿ ರೈಲು ದುರಂತ, 20 ಸಾವು : ಮಧ್ಯಪ್ರದೇಶದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ರೈಲುಗಳ ಹಳಿ ತಪ್ಪಿದ್ದು ಭಾರೀ ದುರಂತ ಸಂಭವಿಸಿದೆ. ಅಪಘಾತದಲ್ಲಿ ಇದುವರೆಗೂ 20 ಜನರು ಮೃತಪಟ್ಟಿದ್ದು, 300 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.
ಬುಧವಾರ ಮುಂಜಾನೆ 12.10ರ ಸುಮಾರಿಗೆ ಮಧ್ಯಪ್ರದೇಶದ ಹರ್ದಾ ಬಳಿ ಈ ರೈಲು ಅಪಘಾತ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ಸೇನೆ, ಸ್ಥಳೀಯ ಪೊಲೀಸರು ಪ್ರಯಾಣಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಮಚಕ್ ನದಿಗೆ ರೈಲಿನ ಬೋಗಿಗಳು ಬಿದ್ದಿರುವುದರಿಂದ ರಕ್ಷಣಾ ಕಾರ್ಯ ಸವಾಲಾಗಿದೆ. ಜನತಾ ಎಕ್ಸ್ಪ್ರೆಸ್ ಮತ್ತು ಕಾಮಾಯಾನಿ ಎಕ್ಸ್ಪ್ರೆಸ್ ರೈಲುಗಳ ಒಟ್ಟು 16 ಬೋಗಿಗಳು ಹಳಿತಪ್ಪಿದೆ. ಜನತಾ ಎಕ್ಸ್ಪ್ರೆಸ್ ರೈಲು ಜಬಲ್ ಪುರದಿಂದ ಮುಂಬೈಗೆ ತೆರಳುತ್ತಿತ್ತು. ಮುಂಬೈನಿಂದ ವಾರಣಾಸಿಗೆ ಕಾಮಾಯಾನಿ ರೈಲು ತೆರಳುತ್ತಿತ್ತು. [ವಿಶ್ವದ ಅತಿ ದೊಡ್ಡ ಸಂಸ್ಥೆಗಳ ಪೈಕಿ ಭಾರತದ ಆರ್ಮಿ, ರೈಲ್ವೆ]
Deeply
saddened
by
this
tragic
train
accident
near
Harda.
My
heartfelt
condolences
to
the
families
of
deceased
in
this
unfortunate
tragedy.
—
ShivrajSingh
Chouhan
(@ChouhanShivraj)
August
5,
2015
ಅಪಘಾತ ನಡೆದಿದ್ದು ಹೇಗೆ? : ಕಾಮಾಯಾನಿ ರೈಲು ಮಚಕ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಬರುತ್ತಿದ್ದಂತೆ ಸೇತುವೆ ಕುಸಿದಿದ್ದು, S1 ನಿಂದ S11 ವರೆಗಿನ ಬೋಗಿಗಳು ಹಳಿತಪ್ಪಿ ನದಿಗೆ ಉರುಳಿವೆ. ಇದೇ ಸೇತುವೆ ಮೇಲೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಜನತಾ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದ್ದರಿಂದ 4 ಬೋಗಿಗಳು ನದಿಗೆ ಉರುಳಿವೆ.
Rushing
emergency
medical
&
other
relief
personnel
to
spot.
darkness,water
creating
hurdles
but
ordered
all
possible
help.
Trying
our
best
—
Suresh
Prabhu
(@sureshpprabhu)
August
4,
2015
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಮತ್ತು ಕೇಂದ್ರ ರೈಲೈ ಸಚಿವ ಸುರೇಶ್ ಪ್ರಭು ಅವರು ರಕ್ಷಣಾ ಕಾರ್ಯಚರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. 'ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ' ಎಂದು ಸುರೇಶ್ ಪ್ರಭು ಹೇಳಿದ್ದಾರೆ.